ADVERTISEMENT

‘ನಿಸ್ವಾರ್ಥ ಸೇವೆಯ ಪ್ರತೀಕ ಸಾಯಿ ಬಾಬಾ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 15:42 IST
Last Updated 9 ಜುಲೈ 2019, 15:42 IST
ಗುರುಪೂರ್ಣಿಮಾ ಉತ್ಸವ ನಿಮಿತ್ತ ಹುಬ್ಬಳ್ಳಿಯ ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿ ಬಾಬಾ ಮಂದಿರದಲ್ಲಿ ಶಿರಡಿ ಸಾಯಿ ಸದ್ಭಕ್ತ ಮಂಡಳಿ ವತಿಯಿಂದ ಪೂಜೆ ನೆರವೇರಿತು
ಗುರುಪೂರ್ಣಿಮಾ ಉತ್ಸವ ನಿಮಿತ್ತ ಹುಬ್ಬಳ್ಳಿಯ ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿ ಬಾಬಾ ಮಂದಿರದಲ್ಲಿ ಶಿರಡಿ ಸಾಯಿ ಸದ್ಭಕ್ತ ಮಂಡಳಿ ವತಿಯಿಂದ ಪೂಜೆ ನೆರವೇರಿತು   

ಹುಬ್ಬಳ್ಳಿ: ನಗರದ ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿ ಮಂದಿರದಲ್ಲಿ ಮಂಗಳವಾರ ಗುರುಪೂರ್ಣಿಮಾ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉತ್ಸವ ಉದ್ಘಾಟಿಸಿ ಮಾತನಾಡಿದ ಉಣಕಲ್ಲಿನ ಶಿರಡಿ ಸಾಯಿ ಮಹಾ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ ತ್ರಿಮಲ್ಲೆ, ‘ಸಾಯಿ ಬಾಬಾ ಅವರು ನಿಸ್ವಾರ್ಥ ಸೇವೆಯ ಪ್ರತೀಕವಾಗಿದ್ದಾರೆ. ಅವರಲ್ಲಿ ನಂಬಿಕೆ ಇಟ್ಟು ಒಳ್ಳೆಯ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ’ ಎಂದರು.

‘ಮನುಷ್ಯ ಅತಿಯಾಗಿ ಆಸೆಪಡದೆ ಮಿತಿಯೊಳಗೆ ಬದುಕು ದೂಡಬೇಕು. ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಇದರಿಂದ ಮತ್ತೊಬ್ಬರಿಗೆ ಆಸರೆಯಾಗುವುದಲ್ಲದೆ, ದಾನ ಮಾಡಿದವರಿಗೂ ಒಂದು ರೀತಿಯ ನೆಮ್ಮದಿ ಸಿಗುತ್ತದೆ’ ಎಂದು ಹೇಳಿದರು.

ADVERTISEMENT

ಶಿರಡಿ ಸಾಯಿ ಸದ್ಭಕ್ತ ಮಂಡಳಿಯ ಅಧ್ಯಕ್ಷ ಡಾ. ಟಿ.ಎಸ್. ಮೋಹನಕುಮಾರ ಮಾತನಾಡಿ, ‘ಭಕ್ತರಿಂದಾಗಿ ಸಾಯಿ ಮಂದಿರದಲ್ಲಿ ಬಾಬಾರಿಗೆ ನಿತ್ಯ ಸೇವಾ ಕೈಂಕರ್ಯಗಳು ನೆರವೇರುತ್ತಿವೆ. ಗುರುಪೂರ್ಣಿಮಾ ಉತ್ಸವದ ನಿಮಿತ್ತ ಜುಲೈ 10ರಿಂದ 16ರವರೆಗೆ ‘ಶ್ರೀ ಸಾಯಿ ದಿವ್ಯ ಚರಿತ್ರೆ ಪಾರಾಯಣ ಪಠಣ’ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಾಬಾರ ಕೃಪೆಗೆ ಪಾತ್ರವಾಗಬೇಕು’ ಎಂದು ಮನವಿ ಮಾಡಿದರು.

ಗುರುಪೂರ್ಣಿಮಾ ಉತ್ಸವ ಸಮಿತಿ ಉಸ್ತುವಾರಿ ಅಧ್ಯಕ್ಷ ಹಾಗೂ ಸಾಯಿ ಸದ್ಭಕ್ತ ಮಂಡಳಿಯ ನಿರ್ದೇಶಕರಾದ ನರಸಿಂಗಸಾ ಆರ್‌. ರತನ, ಗಣೇಶ, ಎಂ. ಮ್ಯಾಗೇರಿ ಹಾಗೂ ನಾರಾಯಣ ಜಿ. ಕಾಟಿಗರ ಇದ್ದರು. ರಾಜು ಬೋಂಗಾಳೆ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.