ADVERTISEMENT

ಹುಬ್ಬಳ್ಳಿ: ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 8:41 IST
Last Updated 23 ನವೆಂಬರ್ 2020, 8:41 IST
ಗ್ರಾಮದ ರುದ್ರಭೂಮಿಗೆ ಭೂಮಿ ನೀಡಿದ ಚನ್ನ ಬಸಮ್ಮ ಕಣವಿ ಅವರಿಗೆ ಚೆಕ್ ವಿತರಿಸಿದರು.
ಗ್ರಾಮದ ರುದ್ರಭೂಮಿಗೆ ಭೂಮಿ ನೀಡಿದ ಚನ್ನ ಬಸಮ್ಮ ಕಣವಿ ಅವರಿಗೆ ಚೆಕ್ ವಿತರಿಸಿದರು.   

ಹುಬ್ಬಳ್ಳಿ: ತಾಲೂಕಿನ ಶಿರೂರು ಹೋಬಳಿಯ ಕೋಳಿವಾಡ ಗ್ರಾಮದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ‌ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ‌್ ಭಾಗವಹಿಸಿದ್ದರು. 94 ಸಿ ಅಡಿ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿದ 26 ಕುಟುಂಬಗಳಿಗೆ ಹಕ್ಕು ಪತ್ರ ವಿವರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ರುದ್ರಭೂಮಿಗೆ ಭೂಮಿ ನೀಡಿದ ಚನ್ನ ಬಸಮ್ಮ ಕಣವಿ ಅವರಿಗೆ ಚೆಕ್ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.