ಗದಗ: ಇಲ್ಲಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ತೇರಿನ ಗಾಲಿ ಪೂಜೆ ಕಾರ್ಯಕ್ರಮ ಶನಿವಾರ ನಡೆಯಿತು.
ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಚನ ಪ್ರಾರ್ಥನೆ, ವಚನ ಘೋಷಣೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತೇರಿನ ಗಾಲಿಗೆ ಎಸ್.ಎಸ್. ಕಳಸಾಪೂರಶೆಟ್ರ ಪೂಜೆ ಸಲ್ಲಿಸಿದರು.
ಜಾತ್ರಾ ಸಮಿತಿಯ ಅಧ್ಯಕ್ಷ ಎಂ.ಬಿ. ನಿಂಬಣ್ಣವರ, ಉಪಾಧ್ಯಕ್ಷ ಅಮರೇಶ ಅಂಗಡಿ, ಬಸವರಾಜ ಬಿಂಗಿ, ಪ್ರಭುದೇವ ಹಿರೇಮಠ, ಅಕ್ಕಮಹಾದೇವಿ ಚೆಟ್ಟಿ, ಕಾರ್ಯದರ್ಶಿ ಈರಣ್ಣ ಮುದುಗಲ್, ಸಹ ಕಾರ್ಯದರ್ಶಿ ನಾಗಲಿಂಗಪ್ಪ ಐಲಿ, ಮೋಹನ ಗಜಾಕೋಶ, ಸಂಘಟನಾ ಕಾರ್ಯದರ್ಶಿ ಚನ್ನಬಸವೇಶ್ವರ ಟೊಪಗಿ, ಕೋಶಾಧ್ಯಕ್ಷ ಈರಣ್ಣ ಬಾಳಿಕಾಯಿ, ಸಹ ಕೋಶಾಧ್ಯಕ್ಷ ರಾಘವೇಂದ್ರ ಎಸ್. ಕಾಲವಾಡ, ಎಂ.ಬಿ. ಬಡ್ನಿ, ಅನಂತ ಶಿವಪೂರ, ಶೇಖಣ್ಣ ಕವಳಿಕಾಯಿ, ಎಸ್.ಎಸ್. ಪಟ್ಟಣಶೆಟ್ಟಿ, ದಾನಪ್ಪ ತಡಸದ, ಪ್ರಾಚಾರ್ಯ ಸಿ.ಲಿಂಗಾರೆಡ್ಡಿ, ಮಂಜುನಾಥ ಅಬ್ಬಿಗೇರಿ, ಎಂ.ಎಸ್. ಅಂಗಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.