ಗದಗ: ಇಲ್ಲಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು, ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.
‘ಸಿದ್ಧಗಂಗಾ ಶ್ರೀಗಳು ಬಡ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ದಾಸೋಹ ಕಾರ್ಯಕ್ರಮವನ್ನು ಸ್ಮರಿಸಿದ ಅವರು, ಶೀಘ್ರವಾಗಿ ಅವರು ಗುಣಮುಖರಾಗಲಿ’ ಎಂದು ಆಶಿಸಿದರು.
‘ಸಿದ್ಧಗಂಗಾ ಶ್ರೀಗಳು ಮಹಾ ಪುರುಷರು. ಉಳಿದ ಮಠಾಧೀಶರಿಗೂ ಅವರು ಮಾದರಿ. ಅವರಿಗೆ ‘ಭಾರತ ರತ್ನ’ ಗೌರವ ನಿಡಬೇಕು’ ಎಂದು ತೋಂಟದ ಶ್ರೀಗಳು ಹೇಳಿದರು. ಸಿದ್ಧಗಂಗಾ ಕಿರಿಯ ಶ್ರೀ, ಹುಣಸೂರು ತಾಲ್ಲೂಕಿನ ಗಾವಡಗೇರಿ ಮಠದ ಶ್ರೀ, ಬೆಂಗಳೂರು ಗುರುವನ ದೇವರ ಮಠದ ಶ್ರೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.