ADVERTISEMENT

9 ತಾಸಿನಲ್ಲಿ 17 ಎಕರೆ ಈರುಳ್ಳಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:31 IST
Last Updated 10 ಜುಲೈ 2013, 9:31 IST
ರೋಣ ತಾಲ್ಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ತಾಳಿ ಕೇವಲ 9 ತಾಸಿನಲ್ಲಿ 17 ಎಕರೆ ಬಿತ್ತನೆ ಮಾಡಿದ ರೈತನೊಂದಿಗೆ ಗ್ರಾಮಸ್ಥರು ಚಿತ್ರದಲ್ಲಿದ್ದಾರೆ.
ರೋಣ ತಾಲ್ಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ತಾಳಿ ಕೇವಲ 9 ತಾಸಿನಲ್ಲಿ 17 ಎಕರೆ ಬಿತ್ತನೆ ಮಾಡಿದ ರೈತನೊಂದಿಗೆ ಗ್ರಾಮಸ್ಥರು ಚಿತ್ರದಲ್ಲಿದ್ದಾರೆ.   

ರೋಣ: ತಾಲ್ಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ತಾಳಿ ಎಂಬ ರೈತ ಗ್ರಾಮದ ಬಸಪ್ಪ ಉಸಲಕೊಪ್ಪ ಎಂಬುವರ ಹೊಲದಲ್ಲಿ ಅವರ ಎತ್ತುಗಳಿಂದ ಕೇವಲ 9 ತಾಸಿನಲ್ಲಿ 17 ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂಥ ಸಾಹಸಗಳು ವಿದ್ಯಾವಂತ ಯುವಕರಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸಲು ಸಹಾಯಕವಾಗಿದೆ ಎಂದು ಹೇಳಿದರು.

ಬೆಳಿಗ್ಗೆ 6 ಗಂಟೆಗೆ ಕಾರ್ಮಿಕರೊಂದಿಗೆ ಸೇರಿಕೊಂಡು ಸಾಧನೆಗೆ ಇಳಿದ ಅಯ್ಯಪ್ಪ, ನಿರಂತರವಾಗಿ 17 ತಾಸು ಬಿತ್ತನೆ ಕಾರ್ಯ ಮಾಡಿದರು. ನಂತರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಮದ ಹಿರಿಯರಾದ ಪಕ್ಕಪ್ಪ ತಾಳಿ, ವೈ.ಕೆ. ಕುರಿ, ಮುದಕಪ್ಪ ನಿಶ್ಯಾನಿ, ಬಾಳಪ್ಪ ಕಾಶಪ್ಪನವರ, ಎಚ್.ಎಂ.  ತಾಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.