ADVERTISEMENT

ಗ್ರಂಥಾಲಯ ಕಟ್ಟಡಕ್ಕೆ ಗ್ರಹಣ

ಬಾಬು ಎಂ.ಆರ್
Published 3 ಜುಲೈ 2013, 7:48 IST
Last Updated 3 ಜುಲೈ 2013, 7:48 IST
ಗ್ರಂಥಾಲಯದ ಕಟ್ಟಡದ ತಳಪಾಯ ಶಿಥಿಲಗೊಂಡಿರುವುದು
ಗ್ರಂಥಾಲಯದ ಕಟ್ಟಡದ ತಳಪಾಯ ಶಿಥಿಲಗೊಂಡಿರುವುದು   

ರಾಮನಾಥಪುರ: ಕೊಣನೂರಿನ ಹೃದಯ ಭಾಗದಲ್ಲಿರುವ  ಸಾರ್ವ ಜನಿಕ  ಗ್ರಂಥಾಲಯದ ಸುತ್ತಲಿನ ವಾತಾವರಣ ಗ್ರಂಥಾಲಯಕ್ಕೆ ಬರುವವರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.

ಗ್ರಂಥಾಲಯವನ್ನು ಸ್ಥಳಾಂತರ ಮಾಡಿ ಅಥವಾ ಸುತ್ತ ಕಾಂಪೌಂಡ್ ನಿರ್ಮಿಸಿ ಎಂದು ಹಲವು ಬಾರಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಕಟ್ಟಡದ ತಳಪಾಯ ಶಿಥಿಲವಾಗಿದೆ. ಗ್ರಂಥಾಲಯದ ಮುಂದೆ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿಯೇ ಕೆಲವರು ಶೌಚವನ್ನೂ ಮಾಡುತ್ತಾರೆ.

ಗ್ರಂಥಾಲಯದ ಅಕ್ಕ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ದಾರಿಹೋಕರು ಮೂತ್ರ ವಿಸರ್ಜನೆ ಮಾಡುವುದರಿಂದ ಮಹಿಳೆಯರು, ಮಕ್ಕಳು ಗ್ರಂಥಾಲಯದತ್ತ ವರುವುದೇ ಇಲ್ಲ.

ಗ್ರಂಥಾಲಯದ ಸುತ್ತ ಕಾಂಪೌಂಡ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಮೊದಲು ಗಮನ ಹರಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.