ADVERTISEMENT

ನಾಯಕರ ಭಾವಚಿತ್ರ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 10:38 IST
Last Updated 2 ಏಪ್ರಿಲ್ 2018, 10:38 IST
ಚನ್ನರಾಯಪಟ್ಟಣ ತಾಲ್ಲೂಕು ಜೋಗಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ಹಾಕಿರುವ ಎಚ್‌.ಡಿ.ರೇವಣ್ಣ, ಸಿ.ಎನ್‌.ಬಾಲಕೃಷ್ಣ ಅವರ ಭಾವಚಿತ್ರ ತೆರವಿಗೆ ಅಧ್ಯಕ್ಷೆ ಬೋರಮ್ಮ, ಕೆಲ ನಿರ್ದೇಶಕರು ಆಗ್ರಹಿಸಿದರು
ಚನ್ನರಾಯಪಟ್ಟಣ ತಾಲ್ಲೂಕು ಜೋಗಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ಹಾಕಿರುವ ಎಚ್‌.ಡಿ.ರೇವಣ್ಣ, ಸಿ.ಎನ್‌.ಬಾಲಕೃಷ್ಣ ಅವರ ಭಾವಚಿತ್ರ ತೆರವಿಗೆ ಅಧ್ಯಕ್ಷೆ ಬೋರಮ್ಮ, ಕೆಲ ನಿರ್ದೇಶಕರು ಆಗ್ರಹಿಸಿದರು   

ಚನ್ನರಾಯಪಟ್ಟಣ: ಜೋಗಿಪುರ ದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ಹಾಕಿರುವ ರಾಜಕೀಯ ನಾಯಕರಾದ ಎಚ್‌.ಡಿ. ರೇವಣ್ಣ, ಸಿ.ಎನ್‌.ಬಾಲಕೃಷ್ಣ ಭಾವಚಿತ್ರ ತೆರವುಗೊಳಿಸಲು ಅಧ್ಯಕ್ಷೆ ಆಗ್ರಹಿಸಿದ್ದಾರೆ.ಸಂಘದ ಅಧ್ಯಕ್ಷೆ ಬೋರಮ್ಮ ಹಾಗೂ ಕೆಲ ನಿರ್ದೇಶಕರು, ಭಾವಚಿತ್ರ ಹಾಕಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದರು. ಭಾವಚಿತ್ರ ಅಳವಡಿಕೆ ಕೆಲವರ ಬೇಸರಕ್ಕೆ ಕಾರಣವಾಗಿದ್ದು, ಹಾಲು ಸಂಗ್ರದ ಮೇಲೂ ಪರಿಣಾಮ ಬೀರಿದೆ. ಸದ್ಯ ಸಂಘದ ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು.ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸುತ್ತಿರುವ ಕಾರಣ ಕೆಲವರು ಶನಿವಾರ ಸಂಜೆಯಿಂದ ಹಾಲು ಪೂರೈಸುತ್ತಿಲ್ಲ’ ಎಂದು ಹೇಳಿದ್ದಾರೆ. ಡೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಿ ಎಂದರು.

‘ಹಳೆಯ ಕಟ್ಟಡದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಮನೆಯಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ’ ಎಂದು ಕಾರ್ಯದರ್ಶಿ ಮಹಾಲಕ್ಷ್ಮಿ ಹೇಳಿದರು.ಭಾನುವಾರ ಬೆಳಿಗ್ಗೆ ಸಂಘದ ನೂತನ ಕಟ್ಟಡದ ಮುಂದೆ ಎರಡು ಗುಂಪಿನವರು ಜಮಾಯಿಸಿದರು. ಭಾವಚಿತ್ರ ತೆಗೆಯಬೇಕು, ತೆಗೆಯ ಬಾರದು ಎಂದು ಭಿನ್ನ ವಾದ ಮಂಡಿಸಿದ ಕಾರಣ ಗೊಂದಲ ಉಂಟಾಗಿತ್ತು.

ಕಂದಾಯ ನಿರೀಕ್ಷಕ ಮೋಹನ್‌ಕುಮಾರ್‌, ಡೇರಿ ವಿಸ್ತರಣಾಧಿಕಾರಿ ಯೋಗೇಶ್‌ ಭೇಟಿ ನೀಡಿದ್ದರು. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಚುನಾವಣೆವರೆಗೆ ಸಮುದಾಯ ಭವನದಲ್ಲಿ ಉತ್ಪಾದಕರಿಂದ ಹಾಲು ಸಂಗ್ರಹಿಸಬೇಕು ಎಂದು ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.