ಹಳೇಬೀಡು: ‘ಮೇಲು– ಕೀಳು ಎನ್ನದೆ ಎಲ್ಲ ವರ್ಗದವರಿಗೂ ಬದುಕುವ ಹಕ್ಕನ್ನು ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ’ ಎಂದು ದಲಿತ ಮುಖಂಡ ಅಪ್ಪಗೌಡನಹಳ್ಳಿ ರತೀಶ್ ಹೇಳಿದರು.
ಹಳೇಬೀಡಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾನತೆಗೆ ಮಹತ್ವ ನೀಡಿ ಸಂವಿಧಾನ ರಚನೆ ಮಾಡಿದ್ದರಿಂದ ಅಂಬೇಡ್ಕರ್ ಮಹಾನ್ ಮಾನವತಾವಾದಿ ಎನಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.
ದಲಿತ ಮುಖಂಡರಾದ ತಿರುಮಲನಹಳ್ಳಿ ಶಿವಕುಮಾರ್, ಜಗದೀಶ್, ರಾಜಗೆರೆ ಮಂಜುನಾಥ್, ಪುಟ್ಟಸ್ವಾಮಿ, ನ.ಹರೀಶ್, ಸತೀಶ್, ಮಲ್ಲಾಪುರ ಅಣ್ಣಯ್ಯ, ಮೋಹನ್ ಕುಮಾರ್, ಹುಲಿಕೆರೆ ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.