ADVERTISEMENT

10 ಜನರ ವಿರುದ್ಧ ಎಫ್‌ಐಆರ್‌

ಬಿಜೆಪಿ ಗುಂಪುಗಳ ನಡುವೆ ಮಾರಾಮಾರಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:04 IST
Last Updated 2 ಡಿಸೆಂಬರ್ 2021, 16:04 IST

ಹಾಸನ: ಅರಸೀಕೆರೆಯಲ್ಲಿ ನ. 30ರಂದು ಬಿಜೆಪಿಯ ಎರಡು ಗುಂಪುಗಳ ನಡುವಿನ ಮಾರಾಮಾರಿ ಸಂಬಂಧ ನಗರ ಠಾಣೆಯಲ್ಲಿ ಮೂರು ಎಫ್‌ಐಆರ್‌ ದಾಖಲಾಗಿವೆ.

ಎನ್‌.ಆರ್‌. ಸಂತೋಷ್‌ ಮತ್ತು ಅಣ್ಣಾಯಕನಹಳ್ಳಿ ವಿಜಯಕುಮಾರ್‌ ಬಣದವರು ಪರಸ್ಪರಹೊಡೆದಾಡಿಕೊಂಡಿದ್ದರು. ಹಲ್ಲೆಗೊಳಗಾಗಿದ್ದ ವಿಜಯ ಕುಮಾರ್‌ ಬಣದ ಮೋಹನ್‌ ನಾಯ್ಕ್‌ನೀಡಿದ ದೂರು ಆಧರಿಸಿ ನಗರಸಭೆ ಮಾಜಿ ಸದಸ್ಯ ಸೇರಿ ಐವರ ವಿರುದ್ಧ ಪ್ರಕರಣದಾಖಲಿಸಲಾಗಿದೆ.

ನಗರಸಭೆ ಮಾಜಿ ಸದಸ್ಯ ಹರ್ಷವರ್ಧನ್‌, ಚಂದ್ರಶೇಖರ್‌, ಸುಬ್ರಹ್ಮಣ್ಯ ಬಾಬು, ಸೈಯದ್‌ಸಿಖಂದರ್‌, ಮಟ್ಕಾ ಕುಮಾರ್‌‌ ವಿರುದ್ಧ ಎಫ್‌ಐಆರ್‌ ಆಗಿದೆ. ಪ್ರತಿಯಾಗಿ ಸಂತೋಷ್‌ ಬಣದವರುನೀಡಿದ ದೂರಿನ ಅನ್ವಯ, ವಿಜಯ ಕುಮಾರ್‌, ಮಲ್ಲಿಕಾರ್ಜುನ, ಶಶಿ, ಚರಣ್‌, ಶಿವರಾಜ್‌ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.