ADVERTISEMENT

ರಸ್ತೆಗೆ ತೇಲಿ ಬಂದ ಟಿ.ವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 3:21 IST
Last Updated 19 ಜೂನ್ 2022, 3:21 IST
ಚನ್ನರಾಯಪಟ್ಟಣದಲ್ಲಿ ಶನಿವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು. ಅಂಗಡಿಯ ಮುಂದೆ ರಿಪೇರಿ ಮಾಡಲು ಇಟ್ಟಿದ್ದ ಟಿ.ವಿ. ಮಳೆಯ ನೀರಿನಲ್ಲಿ ತೇಲಿಬಂತು
ಚನ್ನರಾಯಪಟ್ಟಣದಲ್ಲಿ ಶನಿವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು. ಅಂಗಡಿಯ ಮುಂದೆ ರಿಪೇರಿ ಮಾಡಲು ಇಟ್ಟಿದ್ದ ಟಿ.ವಿ. ಮಳೆಯ ನೀರಿನಲ್ಲಿ ತೇಲಿಬಂತು   

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ರಭಸದ ಮಳೆಯಾಯಿತು.

ಸಂಜೆ 5.45ಕ್ಕೆ ಗುಡುಗು ಸಹಿತ ಜೋರಾಗಿ ಮಳೆ ಬಿತ್ತು. ತಗ್ಗು ಪ್ರದೇಶವಾದ ರೇಣುಕಾಂಬಾ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯಿತು. ಅಲ್ಲದೇ ಚರಂಡಿ ಮುಚ್ಚಿಕೊಂಡಿದ್ದರಿಂದ ಕೆಲ ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿ ಅವಾಂತರವಾಯಿತು.

ಮಾಧ್ಯಮಿಕ, ಶಾಲಾ ಆವರಣದಲ್ಲಿ ನೀರು ನಿಂತಿತ್ತು. ಬಾಗೂರು ರಸ್ತೆ, ಬಿ.ಎಂ. ರಸ್ತೆಯಲ್ಲಿ ಮಳೆಯ ನೀರು ಹರಿಯಿತು.

ADVERTISEMENT

ರೇಣುಕಾಂಬಾ ರಸ್ತೆಯಲ್ಲಿ ಅಂಗಡಿಗಳ ಮುಂದೆ ರಿಪೇರಿ ಮಾಡಲು ಇಟ್ಟಿದ ಟಿ.ವಿ. ಮಳೆಯ ನೀರಿನಲ್ಲಿ ರಸ್ತೆಯಲ್ಲಿ ತೇಲಿ ಬಂತು ಎಂದು ಸಮಾಜ ಸೇವಕ ಸಿ.ಟಿ. ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.