ಹಳೇಬೀಡು: ದನ ಮೇಯಿಸಲು ತೆರಳಿದ್ದ ಮಹಿಳೆಯನ್ನು ಕೊಲೆಗೈದು ಮಣ್ಣಿನಲ್ಲಿ ಮುಚ್ಚಿ ಹಾಕಿರುವ ಘಟನೆ ಮಾದಿಹಳ್ಳಿ ಹೋಬಳಿಯ ಹಾಲ್ತೋರೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಪುಟ್ಟಲಕ್ಷಮಮ್ಮ (50) ಕೊಲೆಯಾದ ಮಹಿಳೆ. ದನ ಮೇಯಿಸಲು ಹೋದ ಪುಟ್ಟಲಕ್ಷ್ಮಮ್ಮ ಬುಧವಾರ ರಾತ್ರಿಯಾದರೂ ಮನೆಗೆ ಬರಲಿಲ್ಲ. ಮನೆಯವರು ಗಾಬರಿಗೊಂಡು ಹುಡುಕಾಡಿದರೂ ಸಿಗಲಿಲ್ಲ. ಗುರುವಾರ ದನ ಮೇಯಿಸುವ ಸ್ಥಳದಲ್ಲಿ ಮಣ್ಣಿನಲ್ಲಿ ಮುಚ್ಚಿದ ಶವ ಪತ್ತೆಯಾಗಿದೆ.
ಯಾರು ಯಾವ ಕಾರಣಕ್ಕೆ ಕೊಲೆ ಮಾಡಿದರೂ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಶ್ವಾನದಳ ಸಿಬ್ಬಂದಿಯೊಂದಿಗೆ ಬಂದು ಸ್ಥಳ ಪರಿಶೀಲಿಸಿದರು.
ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರೀಕ್ಷೆಗಾಗಿ ಶವ ಹೊರ ತೆಗೆಯಲು ಉಪ ವಿಭಾಗಾಧಿಕಾರಿಗಳ ಆದೇಶ ನೀಡಲು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.