ADVERTISEMENT

ಅಫಜಲಪುರ: ಬೆದರಿಕೆ ಹಾಕಿದ 9 ಜನರ ವಿರುದ್ಧ ಪ್ರಕರಣ ದಾಖಲು

ಹೇಳಿದ ಅಭ್ಯರ್ಥಿಗೆ ಮತ ಹಾಕುವಂತೆ ಬೆದರಿಕೆ!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:04 IST
Last Updated 29 ಮಾರ್ಚ್ 2018, 12:04 IST

ಕಲಬುರ್ಗಿ: ಅಫಜಲಪುರ ಪಟ್ಟಣದ ಬಸ್ ನಿಲ್ದಾಣ ಹಾಗೂ ರೇವಣಸಿದ್ದೇಶ್ವರ ಕಾಲೊನಿಯಲ್ಲಿ ಗುಂಪು ಕಟ್ಟಿಕೊಂಡು, ‘ನಾವು ಹೇಳಿದ ಅಭ್ಯರ್ಥಿಗೆ ಮತ ಹಾಕಬೇಕು. ಇಲ್ಲವಾದಲ್ಲಿ ಸುಮ್ಮನೆ ಬಿಡುವುದಿಲ್ಲ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿದ್ದ 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಂಗಣ್ಣಾ ಗುಣಾರಿ, ಸಿದ್ದಪ್ಪ ನಾಗಾಣಸೂರ, ಪ್ರವೀಣ ರಾಂಪುರೆ, ಧನ್ನು ಅಲಿಯಾಸ್ ಧನರಾಜ ಕಲಕೇರಿ, ಹರೀಶ ಸಾಸನೇಕರ, ಗಿರೀಶ ಸಾಸನೇಕರ, ಯೋಗೇಶ ಸಾಸನೇಕರ, ರಮೇಶ ಸಾಸನೇಕರ, ಸಂತೋಷ ಸಾಸನೇಕರ ಅವರ ವಿರುದ್ಧ ಶಾಂತಿ ಭಂಗ ಆರೋಪದಡಿ (ಸಿಆರ್‌ಪಿಸಿ 107) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳನ್ನು ತಹಶೀಲ್ದಾರ್ ಎದುರು ಹಾಜರುಪಡಿಸಿ, ಮುಚ್ಚಳಿಕೆ ಪತ್ರ ಹಾಗೂ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡ ಲಾಗಿದೆ’ ಎಂದು ತಿಳಿಸಿದ್ದಾರೆ.

250 ಲೀಟರ್ ಸೇಂದಿ ವಶ

ADVERTISEMENT

ಕಲಬುರ್ಗಿ: ಸೇಡಂ ತಾಲ್ಲೂಕು ಮುಧೋಳ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 250 ಲೀಟರ್ ಸೇಂದಿಯನ್ನು ಅಬಕಾರಿ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

‘ಆರೋಪಿ ಶಂಕರೆಪ್ಪ ಸಣ್ಣಪ್ಪ ರಾಮಪ್ಪ ಪರಾರಿಯಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದು ಅಬಕಾರಿ ಇನ್‌ಸ್ಪೆಕ್ಟರ್ ಎಂ.ಎನ್.ಜಹಾಗೀರದಾರ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.