ಹುಣಸಗಿ: ‘ನಾರಾಯಣಪುರ ಎಡದಂಡೆ ಮುಖ್ಯಕಾಲುವೆಯ 61ನೇ ಕಿ.ಮೀ ಬಳಿ ಕಾಲುವೆ ಅಲ್ಪ ಪ್ರಮಾಣದಲ್ಲಿ ಊದಿಕೊಂಡಿದ್ದರೂ ರೈತರು ಆತಂಕ ಗೊಳ್ಳುವ ಅಗತ್ಯವಿಲ್ಲ’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಎರಡು ತಿಂಗಳ ಹಿಂದೆ ಇದೇ ಸ್ಥಳದ ಬಳಿ 50 ಮೀಟರ್ನಷ್ಟು ಕಾಲುವೆಯ ಆರ್ಸಿಸಿ ಲೈನಿಂಗ್ ಕುಸಿತಗೊಂಡಿತ್ತು. ಆದರೆ, ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅದಕ್ಕೆ ಮರಳು ತುಂಬಿದ ಚೀಲಗಳನ್ನು ಇಟ್ಟು ಎಂದಿನಂತೆ ಕಾಲುವೆಗೆ ನೀರು ಹರಿಸಲಾಗಿತ್ತು. ಸದ್ಯ ಇದೇ ಸ್ಥಳದ ಬಳಿ ಅಂದಾಜು 30 ಮೀಟರ್ನಷ್ಟು ಕಾಲುವೆ ಊದಿಕೊಂಡಿದ್ದರೂ ಹಿಂಗಾರು ಹಂಗಾಮಿಗೆ ವಾರಬಂದಿಯಂತೆ ನೀರು ಹರಿಸುವಲ್ಲಿ ತೊಂದರೆ ಆಗುವ ಸಾಧ್ಯತೆಗಳಿಲ್ಲ’ ಎಂದು ತಿಳಿಸಿದರು.
ಬಳಿಕ ನಿಗಮದ ಮುಖ್ಯ ಎಂಜಿನಿಯರ್ ಕೃಷ್ಣೇಗೌಡ, ಎಸ್ಇ ಎಸ್.ಎ.ಹುದಲಿ ಅವರಿಗೆ ದೂರವಾಣಿಯಲ್ಲಿ ಮಾತನಾಡಿ, ‘ಹಗಲು ರಾತ್ರಿ ಎನ್ನದೇ ಜಾಗ್ರತೆವಹಿಸಿ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು’ ಎಂದು ಹೇಳಿದರು. ಮುಖಂಡರಾದ ಸೂಲಪ್ಪ ಕಮತಗಿ, ವೆಂಕೊಬ ಯಾದವ, ಗುರುನಾಥಗೌಡ ಕರಿಬಾವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.