ADVERTISEMENT

ಭೋಗನಳ್ಳಿ: ಶಾಲಾ ಪ್ರಾರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:33 IST
Last Updated 17 ಮೇ 2022, 4:33 IST
ಅಫಜಲಪುರ ತಾಲ್ಲೂಕಿನ ಭೋಗನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಸಾವಯವ ಕೃಷಿಕ ಲತೀಫ್ ಪಟೇಲ್ ಮಾತನಾಡಿದರು
ಅಫಜಲಪುರ ತಾಲ್ಲೂಕಿನ ಭೋಗನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಸಾವಯವ ಕೃಷಿಕ ಲತೀಫ್ ಪಟೇಲ್ ಮಾತನಾಡಿದರು   

ಕಲಬುರಗಿ: ಅಫಜಲ‍ಪುರ ತಾಲ್ಲೂಕಿನ ಭೋಗನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿತ್ತು.

ಎಸ್‌ಸಿಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್ ಉಪಾಧ್ಯಕ್ಷ ಹಾಜಿ ಮಲಂಗ್, ಸಾವಯವ ಕೃಷಿಕ ಲತೀಫ್ ಪಟೇಲ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಸಂಗಮನಾಥ ಸಾಳಾಪೂರ, ಶಿಕ್ಷಕ ಸಿಬ್ಬಂದಿ ಹಾಗೂ ಬಿಸಿ ಊಟದ ಸಿಬ್ಬಂದಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಸಂಗಮನಾಥ, 2022–23ನೇ ವರ್ಷವನ್ನು ಕಲಿಕಾ ಚೇತರಿಕೆ ವರ್ಷವಂದು ಆಚರಿಸಲಾಗುತ್ತಿದೆ. ಕೋವಿಡ್–19ನಿಂದ ಹಿಂದಿನ ದಿನಗಳಲ್ಲಿ18 ತಿಂಗಳ ಮಕ್ಕಳ ಕಲಿಕೆಯಲ್ಲಿ ಕುಂಠಿತವಾಗಿದೆ. ಆ ಕೊರತೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಬಹಳ ಅವಶ್ಯಕ. ಆದ್ದರಿಂದ ಶಾಲೆಗೆ ದಾಖಲಾದ ಮಗು ನಿರಂತರ ಶಾಲೆಗೆ ಹಾಜರಾಗಬೇಕು. ಜೊತೆಗೆ ಕಲಿಕೆಯಲ್ಲಿ ತೊಡಗಬೇಕು ಎಂದರು.

ADVERTISEMENT

ಬಾಹುಬಲ ಮಾಲಗತ್ತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.