ಕಲಬುರಗಿ: ‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ವೇದಿಕ್ ಸಂಸ್ಥೆಯ ಅಧ್ಯಕ್ಷೆ ಮಮತಾ ಪಾಟೀಲ ಹೇಳಿದರು.
ಇಲ್ಲಿಯ ವೇದಿಕ್ ಸಂಸ್ಥೆಯಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಾಲಕಾರ್ಮಿಕದಂಥ ಅನಿಷ್ಟ ಪದ್ಧತಿಗಳನ್ನು ನಾವೆಲ್ಲರೂ ವಿರೋಧಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮಕ್ಕಳ ತಂದೆ–ತಾಯಿಗಳಿಗೆ ತಿಳಿಹೇಳಬೇಕು’ ಎಂದರು.
ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಭಾಗ್ಯಶ್ರೀ, ರೀನಾ ರಾಠೋಡ, ಸ್ನೇಹ ಶಿವಕೇರಿ ಹಾಗೂ ಸುಹಾಸಿನಿ ತಲ್ವಾರ್ ಇದ್ದರು. ಶಿಕ್ಷಕಿ ಅಶ್ವಿನಿ ಶೇರಿಕರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.