ADVERTISEMENT

‘ಬಡಾವಣೆ ಅಭಿವೃದ್ಧಿಗೆ ಪ್ರಯತ್ನಿಸುವೆ’-ಈರಣ್ಣ ಹೊನ್ನಳ್ಳಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:50 IST
Last Updated 27 ಸೆಪ್ಟೆಂಬರ್ 2021, 15:50 IST
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿ ಪಾಲಿಕೆಯ ನೂತನ ಸದಸ್ಯ ಈರಣ್ಣ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಪಾಲಿಕೆಯ ಮೇಲೆ ಮಾಜಿ ಸದಸ್ಯ ಎಸ್.ಆರ್.ಪಾಟೀಲ್, ಅಮಿತ್ ಪಾಟೀಲ, ಜೆಸ್ಕಾಂ ಎಇಇ ನಾಗರಾಜ ಇದ್ದರು
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿ ಪಾಲಿಕೆಯ ನೂತನ ಸದಸ್ಯ ಈರಣ್ಣ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಪಾಲಿಕೆಯ ಮೇಲೆ ಮಾಜಿ ಸದಸ್ಯ ಎಸ್.ಆರ್.ಪಾಟೀಲ್, ಅಮಿತ್ ಪಾಟೀಲ, ಜೆಸ್ಕಾಂ ಎಇಇ ನಾಗರಾಜ ಇದ್ದರು   

ಕಲಬುರ್ಗಿ: ನಗರದ ಕುಸನೂರ ರಸ್ತೆಯ ಪೂಜಾ ಕಾಲೊನಿ ಬಡಾವಣೆಯಲ್ಲಿ ಇರುವ ಸಮಸ್ಯೆಗಳನ್ನು ಅರಿತುಕೊಂಡು, ಬಡವಣೆ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಪಾಲಿಕೆಯ ನೂತನ ಸದಸ್ಯ ಈರಣ್ಣ ಹೊನ್ನಳ್ಳಿ ಭರವಸೆ ನೀಡಿದರು.

ಇಲ್ಲಿನ ಪೂಜಾ ಕಾಲೊನಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಡಾವಣೆಯ ಅಧ್ಯಕ್ಷ ಎ.ಎಲ್ ಉಪಳಾಂವಕರ ಸತ್ಕರಿಸಿದರು.

ಹಣಮಂತ ರೆಡ್ಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಡಾ. ಶ್ರೀಮಂತ ಹೋಳಕರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಡಾವಣೆಯ ಹಿರಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.