ADVERTISEMENT

ಕಲಬುರ್ಗಿಗೂ ಭೇಟಿ ನೀಡಿದ್ದಬ್ರಹ್ಮಕುಮಾರಿ ದಾದಿ ಗುಲ್ಜಾರ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:24 IST
Last Updated 12 ಮಾರ್ಚ್ 2021, 2:24 IST
ದಾದಿ ಗುಲ್ಜಾರ್
ದಾದಿ ಗುಲ್ಜಾರ್   

ಕಲಬುರ್ಗಿ: ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಹಿಳಾ ಸಂಚಾಲಿತ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದ ದಾದಿ ಗುಲ್ಜಾರ್ (95) ಗುರುವಾರ ನಿಧನರಾದರು.

‘ದಾದಿ ಗುಲ್ಜಾರ್ ಅವರು 80ಕ್ಕೂ ಹೆಚ್ಚು ವರ್ಷಗಳಿಂದ ಭಾರತ ಹಾಗೂ ವಿಶ್ವದೆಲ್ಲೆಡೆ ಆಧ್ಯಾತ್ಮಿಕ ಸೇವೆಯಲ್ಲಿ ಅವಿರತ ಶ್ರಮಿಸಿದ್ದರು.

2005ರಲ್ಲಿ ಕಲಬುರ್ಗಿ ನಗರಕ್ಕೂ ಭೇಟಿ ನೀಡಿದ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅವರನ್ನು ಕಾಣಲು ಸುಮಾರು 50 ಸಾವಿರ ಜನ ಬಂದಿದ್ದರು’ ಎಂದು ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ತಿಳಿಸಿದ್ದಾರೆ.

ADVERTISEMENT

ಮಾರ್ಚ್ 13ರಂದು ಮೌಂಟ್ ಅಬುವಿನ ಜ್ಞಾನಸರೋವರ ಪರಿಸರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.