ಶಹಾಬಾದ್: ‘ನಗರಕ್ಕೆ ಇತಿಹಾಸ ಮರೆಯದ ಕೊಡುಗೆ ನೀಡಿದ ಮುತ್ಸದ್ದಿ ನಾಯಕ, ಮಾಜಿ ಸಚಿವ ಕೆ.ಬಿ. ಶಾಣಪ್ಪ’ ಎಂದು ಕಾಡಾ ನಿಗಮದ ಜಿಲ್ಲಾ ಅಧ್ಯಕ್ಷ ಡಾ. ಎಂ.ಎ. ರಶೀದ್ ಹೇಳಿದರು.
ನಗರದಲ್ಲಿ ಮಾಜಿ ಸಚಿವ ಕೆ.ಬಿ. ಶಾಣಪ್ಪ ರವರ 4ನೇ ಪುಣ್ಯ ಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾದಿಗ ಸಮಾಜದ ಮುಖಂಡ ಡಿ.ಡಿ ಓಣಿ ಮಾತನಾಡಿ, ಶಹಾಬಾದ್ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಮೇಲ್ಸೇತುವೆ ಹಾಗೂ ಮಾದಿಗ ಸಮಾಜದ ರುದ್ರಭೂಮಿ ಅವರು ನಗರಕ್ಕೆ ಕೊಟ್ಟಂತ ದೊಡ್ಡ ಕೊಡುಗೆಯಾಗಿದೆ’ ಎಂದು ಹೇಳಿದರು.
ವಿನೋದ ಕೆ.ಬಿ. ಮಾತನಾಡಿದರು. ಈ ವೇಳೆ ಜಮಲಾಬಾಯಿ ಕೆ.ಬಿ, ಪಾರ್ವತಮ್ಮ, ವಿಜಯಮ್ಮ ನಾಗೇಶ, ಆದಿಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ನಾಗೇಶ, ಮಾದಿಗ ಸಮಾಜದ ಆಧ್ಯಕ್ಷ ವಿಕ್ರಮ ಮೂಲಿಮನಿ, ಭೀಮ ಜಯಂತಿ ಅಧ್ಯಕ್ಷ ಶಂಕರ ಅಳೋಳ್ಳಿ, ಲಕ್ಷ್ಮೀಕಾಂತ ಬಳಿಚಕ್ರ, ಶಿವರಾಜ ಕೋರಿ, ಶಿವರಾಜ ಜೀನಕೇರಿ, ಕಿರಣ ಕೋರೆ, ರಾಜು ಜಂಬಗಿ, ಪ್ರಮೋದ ಮಲ್ಹಾರ, ಮಲ್ಲೇಶಿ ಸೈದಾಪೂರ, ರವಿ ಬೆಳಮಗಿ, ಅಮರ ಕೋರೆ, ನಾಗರಾಜ ಮುದ್ನಾಳ, ನವೀನ ಸಿಪ್ಪಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.