ಅಫಜಲಪುರ: ‘ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ಧರ್ಮದ ವಿರೋಧಿಯಲ್ಲ. ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ಗಾಗಿ ಈ ಕಾಯ್ದೆಯ ಬಗ್ಗೆ ಜನರಲ್ಲಿ ಅಪಪ್ರಚಾರ ಮಾಡುತ್ತಿದೆ’ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಗುರುವಾರ ಇಲ್ಲಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಏರ್ಪಡಿಸಿದ ಸಿಎಎ ಜನಜಾಗೃತಿ ಅಭಿಯಾನ ಮತ್ತು ನೂತನ ತಾಲ್ಲೂಕು ಅಧ್ಯಕ್ಷ ಶೈಲೇಶ ಈರಣ್ಣ ಗುಣಾರಿ ಅವರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿಯಲು ಶ್ರಮಿಸುತ್ತಿರುವ ಮೋದಿಯವರ ಕೈ ಬಲಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ತಿಳಿಸಿದರು
ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ಮಾತನಾಡಿ, ‘ದೇಶದಲ್ಲಿನ ನುಸುಳುಕೋರರನ್ನು ಹೊರ ಹಾಕುವುದು ಪೌರತ್ವ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.
ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ, ಜಿ.ಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಎಪಿಎಂಸಿ ಅಧ್ಯಕ್ಷ ರಾಮಣ್ಣ ನಾಯಕೋಡಿ, ಪ್ರಮುಖರಾದ ವಿದ್ಯಾಸಾಗರ ಕುಲಕರ್ಣಿ, ಅವ್ವಣ್ಣ ಮ್ಯಾಕೇರಿ, ದಿವ್ಯಾ ಹಾಗರಗಿ, ಮಳೇಂದ್ರ ಡಾಂಗೆ, ಗುರುಬಾಳ ಜಕಾಪೂರ, ಪ್ರಭುಲಿಂಗ ದೇವತಕಲ್ ಅಶೋಕ ಬಗಲಿ, ಪಂಚಪ್ಪ ದೇವನಿ, ಸಿದ್ದಯ್ಯ ಆಕಾಶಮಠ, ಶ್ರೀಶೈಲ ಬಳೂರಗಿ, ಚಂದಮ್ಮ ಪಾಟೀಲ್, ಪ್ರಭಾವತಿ ಮೇತ್ರಿ, ಅಪ್ಪಾಶ ಬುರಲಿ, ಧಾನು ಫತಾಟೆ, ಸುನೀಲ್ ಶೆಟ್ಟಿ, ಭೀಮಾಶಂಕರ ಪೂಜಾರಿ, ಚನ್ನಬಸು ನಾವಿ, ಶರಣು ಪದಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.