ADVERTISEMENT

ಸೇಡಂ | ‘ಜಾತಿಗಣತಿಯಲ್ಲಿ ‘ಹೊಲೆಯ’ ಎಂದು ಬರೆಸಿ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:10 IST
Last Updated 30 ಏಪ್ರಿಲ್ 2025, 16:10 IST
ಮಹಾಂತಪ್ಪ ಸಂಗಾವಿ
ಮಹಾಂತಪ್ಪ ಸಂಗಾವಿ   

ಸೇಡಂ: ‘ಸರ್ಕಾರದಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಸಮಾಜ ಜನ ‘ಹೊಲೆಯ’ ಎಂಬ ಪದವನ್ನು ಮಾತ್ರ ಬರೆಸಬೇಕು’ ಎಂದು ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಮೂರ್ತಿ ಎಚ್.ಎನ್ ಣಾಗಮೋಹನದಾಸ್ ಏಕ ಸದಸ್ಯ ವಿಚಾರಣ ಆಯೋಗದನ್ವಯ ಮೇ.5 ರಿಂದ ಮೇ. 23 ರವರೆಗೆ ಜಾತಿ ಸಮೀಕ್ಷೆ ನಡೆಯುತ್ತಿದೆ. ಸರ್ಕಾರದಿಂದ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಆಗಮಿಸಲಿದ್ದಾರೆ. ಯಾರೂ ಸಹ ಗೊಂದಲಕ್ಕೆ ಒಳಗಾಗಿ ನಿಖರ ಮತ್ತು ಸ್ಪಷ್ಟವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ ತೊಟ್ನಳ್ಳಿ, ಜೈಭೀಮ ಊಡಗಿ, ಪ್ರಶಾಂತ ಸೇಡಂಕರ್, ಸಿದ್ದು ಡೊಣ್ಣುರ, ಸಿದ್ದು ಊಡಗಿ, ಮಲ್ಲಿಕಾರ್ಜುನ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.