ADVERTISEMENT

ಶರಣ‌ ಹಡಪದ ಅಪ್ಪಣ್ಣ ಜಯಂತಿ ಸರಳ ಅಚರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 9:53 IST
Last Updated 5 ಜುಲೈ 2020, 9:53 IST
ಕಲಬುರ್ಗಿಯಲ್ಲಿ ಶರಣ ಅಡಪದ ಜನ್ಮದಿನಾಚರಣೆ ಸರಳವಾಗಿ ನಡೆಯಿತು
ಕಲಬುರ್ಗಿಯಲ್ಲಿ ಶರಣ ಅಡಪದ ಜನ್ಮದಿನಾಚರಣೆ ಸರಳವಾಗಿ ನಡೆಯಿತು   

ಕಲಬುರ್ಗಿ: ಶರಣ‌ ಹಡಪದ‌ ಅಪ್ಪಣ್ಣ ಅವರ 886ನೇ‌ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಅಂತರ‌ ಕಾಪಾಡುವುದರ ಜೊತೆಗೆ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಯೋಜಿಸಿದ‌ ಕಾರ್ಯಕ್ರಮದಲ್ಲಿ ಗಣ್ಯರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಎ.ಎಸ್.ಐ. ಸಲೀಂ ಪಟೇಲ್, ಹಡಪದ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಸಿ. ಹಡಪದ, ಮುಖಂಡರಾದ ರಮೇಶ‌ ನೀಲೂರ, ಭಗವಂತ ಹೊನ್ನಕಿರಣಗಿ, ಆನಂದ ಜೋಳಗಿ, ಮಹಾಂತೇಶ‌ ಇಸ್ಲಾಂಪುರೆ, ಅಪ್ಪಣ್ಣ‌ ಬಟಗೇರಾ, ಸಂತೋಷ ಬಗದೂರಗಿ, ಸುನೀಲ ಹಿಪ್ಪರಗಿ, ಚಂದ್ರಕಾಂತ‌ ತೊನಸನಳ್ಳಿ, ಭಾಗಣ್ಣ ಹಡಪದ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.