ADVERTISEMENT

ನದಿಗೆ ಕಾರು: ಚಾಲಕ ಪಾರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:33 IST
Last Updated 3 ಸೆಪ್ಟೆಂಬರ್ 2013, 6:33 IST

ಸಿದ್ದಾಪುರ:  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಇಲ್ಲಿನ ಸೇತುವೆಯ ಬದಿಯಿಂದ ಕಾವೇರಿ ನದಿಗೆ ಬಿದ್ದಿರುವ ಘಟನೆ ನಡೆದಿದ್ದು, ಸವಾರರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ನೆಲ್ಯಹುದಿಕೇರಿಯ ನಿವಾಸಿ ಜೋಯ್ ಹಾಗೂ ಸುನಿಲ್ ಬೆಳಿಗ್ಗೆ 8 ಗಂಟೆ ಹೊತ್ತಿಗೆ ನೆಲ್ಯಹುದಿಕೇರಿಯಿಂದ ಸಿದ್ದಾಪುರದ ಕಡೆಗೆ ಕೆಲಸದ ನಿಮಿತ್ತ ತೆರಳುತ್ತಿದರು.

ಈ ಸಂದರ್ಭ ಸಿದ್ದಾಪುರ ಸೇತುವೆ ತಲುಪುತಿದ್ದಂತೆ ಆಯತಪ್ಪಿ ಸೇತುವೆಯ ಬದಿಯಿಂದ ಕಾರು ಕಾವೇರಿ ನದಿಗೆ ಉರುಳಿದೆ. ನದಿಯ ಬದಿಯಲ್ಲಿ ಬಿದ್ದ ಕಾರಿನಲ್ಲಿದ್ದ ಸವಾರರಿಬ್ಬರು ಸಣ್ಣ ಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗ್ದ್ದಿದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.