ADVERTISEMENT

ಮಲ್ಲಂಬಟ್ಟಿ ಬಳಿ ಪಾದಚಾರಿಗೆ ಕಾರು ಡಿಕ್ಕಿ: ನಿವೃತ್ತ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:22 IST
Last Updated 23 ಫೆಬ್ರುವರಿ 2019, 13:22 IST
ವಿರಾಜಪೇಟೆ ಸಮೀಪದ ಮಲ್ಲಂಬಟ್ಟಿಯಲ್ಲಿ ನಡೆದ ಅಪಘಾತದಲ್ಲಿ ನಿವೃತ್ತ ಯೋಧ ರವಿ ಅವರ ಸಾವಿಗೆ ಕಾರಣವಾದ ವಾಹನವನ್ನು ಗ್ರಾಮಸ್ಥರು ಮಗುಚಿ ಹಾಕಿದರು
ವಿರಾಜಪೇಟೆ ಸಮೀಪದ ಮಲ್ಲಂಬಟ್ಟಿಯಲ್ಲಿ ನಡೆದ ಅಪಘಾತದಲ್ಲಿ ನಿವೃತ್ತ ಯೋಧ ರವಿ ಅವರ ಸಾವಿಗೆ ಕಾರಣವಾದ ವಾಹನವನ್ನು ಗ್ರಾಮಸ್ಥರು ಮಗುಚಿ ಹಾಕಿದರು   

ವಿರಾಜಪೇಟೆ: ಮಲ್ಲಂಬಟ್ಟಿ ಸಮೀಪದ ಗ್ರಾಮದಲ್ಲಿ ಶನಿವಾರ ವಾಕಿಂಗ್‌ ಹೋಗಿ ಮನೆಗೆ ಹಿಂತಿರುಗುತ್ತಿದ್ದ ನಿವೃತ್ತ ಯೋಧರೊಬ್ಬರು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೈತಾಡಿ ಗ್ರಾಮದ ನಿವೃತ್ತ ಯೋಧ ಐಯ್ಯಮಂಡ ರವಿ (49) ಮೃತಪಟ್ಟವರು. ಮಲ್ಲಂಬಟ್ಟಿಯ ತಿರುವಿನ ಬಳಿ ಕಾರು ಡಿಕ್ಕಿಯಾಯಿತು. ಗ್ರಾಮಸ್ಥರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡು ಕಾರನ್ನು ಮಗುಚಿ ಹಾಕಿದರು. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆಯ ಪೊಲೀಸರು ಕಾರಿನ ಚಾಲಕನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದರು.

ಕಾರಿನ ಚಾಲಕ ಬೆಂಗಳೂರಿನವನಾಗಿದ್ದು, ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.