ADVERTISEMENT

ಕಾಂಗ್ರೆಸ್‌ನತ್ತ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:47 IST
Last Updated 23 ಮಾರ್ಚ್ 2014, 10:47 IST

ಮಾಲೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್‌  ಸೇರಿರುವುದಾಗಿ ಪುರಸಭೆ ಮಾಜಿ ಸದಸ್ಯ ಮುನಿವೆಂಕಟಪ್ಪ ತಿಳಿಸಿದರು.

ಪಟ್ಟಣದ 3ನೇ ವಾರ್ಡ್‌ನಲ್ಲಿ ಶನಿವಾರ  ಬ್ಲಾಕ್ ಕಾಂಗ್ರೆಸ್ ಕಾರ್ಯ­ಕರ್ತರ ಸಭೆಯಲ್ಲಿ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿ­ರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮ ಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ವಾರ್ಡ್‌ ಮುಖಂಡರಾದ ಪಿ.ವೆಂಕಟೇಶ್ (ಗಿರಿ), ಸುಬ್ರಮಣಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ­ಯಾದರು.  ಕೆಪಿಸಿಸಿ ಕಾರ್ಯದರ್ಶಿ ಎಸ್.ಎನ್.­ರಘುನಾಥ್,  ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ. ಮುನಿರಾಜು, ಕೆ.ಎಚ್.ಚನ್ನರಾಯಪ್ಪ, ಉಪಾಧ್ಯಕ್ಷ ರಾಜ್ ಗೋಪಾಲರೆಡ್ಡಿ, ಪುರಸಭೆ ಸದಸ್ಯರಾದ ಸಿ.ಲಕ್ಷ್ಮೀ ನಾರಾ­ಯಣ್, ಸಿ.ಪಿ.ವೆಂಕಟೇಶ್, ಮಾಜಿ ಸದಸ್ಯ ಕೋಳಿನಾರಾಯಣ, ಅಪ್ಸರ್ ಪಾಷಾ, ಸುರೇಶ್ ಕುಮಾರ್, ಮುಖಂಡ­ರಾದ ಟಿ.ಬಿ.ಕೃಷ್ಣಪ್ಪ, ಚನ್ನ­ಕೇಶವ , ಜೂಡೋ ರಮೇಶ್, ಸಂಪತ್ ಯಾದವ್, ಶಬ್ಬೀರ್, ಜಯಂತಿ ಶೈಲು, ಉಮಾದೇವಿ  ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.