ADVERTISEMENT

ವಾಲ್ಮೀಕಿ ಜನಾಂಗದ ರ‌್ಯಾಲಿ: ಭಾಗವಹಿಸದಂತೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:05 IST
Last Updated 12 ಸೆಪ್ಟೆಂಬರ್ 2011, 9:05 IST

ಕೋಲಾರ: ನಗರದಲ್ಲಿ ಸೆ.12ರಂದು ನಡೆಯಲಿರುವ ರ‌್ಯಾಲಿಯಲ್ಲಿ ವಾಲ್ಮೀಕಿ ನಾಯಕ ಜನಾಂಗದವರು ಭಾಗವಹಿಸ ಬಾರದು ಎಂದು ವಾಲ್ಮೀಕಿ ಬಂಡಿಮಾಂಕಾಳಮ್ಮ ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ  ಕೆ.ಪುರುಷೋತ್ತಮ ಮನವಿ ಮಾಡಿದ್ದಾರೆ.

ಎಂ.ಡಿ.ಶಿವಾನಂದ ಅವರು ವಾಲ್ಮೀಕಿ ನಾಯಕ ಮಹಾಸಂಘದ ಜಿಲ್ಲಾ ಘಟಕದ ಅಧ್ಯಕ್ಷನೆಂದು ಹೇಳಿಕೊಂಡು ಸಮುದಾಯ ಭವನ ನಿರ್ಮಾಣಕ್ಕೆಂದು ಹಣ ಸಂಗ್ರಹ ಮಾಡುತ್ತಿದ್ದಾರೆ. ಅಲ್ಲದೆ ದೇವಾಲಯ ಅಭಿವೃದ್ಧಿಗೆಂದು ನಿರ್ಮಿಸಲಾಗುತ್ತಿ ರುವ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.