ಕೆಜಿಎಫ್: ದೆಹಲಿಯ ತಬ್ಲಿಗಿ ಜಮಾತ್ನಲ್ಲಿರುವ ಮಸೀದಿಗೆ ಹೋಗಿ ಬಂದಿದ್ದ ಐವರನ್ನು ಬುಧವಾರ ರಾಬರ್ಟ್ಸನ್ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು. ಯಾರಲ್ಲೂ ಕೊರೊನಾ ಸೋಂಕು ಕಂಡುಬಂದಿಲ್ಲ.
ಆಂಡರಸನ್ಪೇಟೆಯ ಪ್ರಾರ್ಥನಾ ಮಂದಿರದಲ್ಲಿದ್ದ ಐವರು ಫೆಬ್ರುವರಿ 8ರಂದು ದೆಹಲಿಗೆ ಹೋಗಿ, 13ರಂದು ವಾಪಸ್ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಮಸೀದಿಗೆ ಭೇಟಿ ನೀಡಿದ್ದರು.
ಭೀಮಗಾನಹಳ್ಳಿಯ ಪ್ರಾರ್ಥನಾ ಮಂದಿರದಲ್ಲಿದ್ದ 11 ಮಂದಿಯನ್ನು ಮಂಗಳವಾರ ನಡುರಾತ್ರಿ ನಗರದ ಇ.ಡಿ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆ ಬಳಿಕ ಅವರನ್ನು ರಾತ್ರಿ 2 ಗಂಟೆಗೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದ, ಬಳಿಕ ಇ.ಡಿ. ಆಸ್ಪತ್ರೆಗೆ ಕರೆತರಲಾಯಿತು. ಬುಧವಾರ ಬೆಳಿಗ್ಗೆ 11 ಗಂಟೆಗೆ ಅವರನ್ನು ಪುನಃ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.