ಕುಕನೂರು: ತಾಲ್ಲೂಕಿನ ಗುದ್ನೇಪ್ಪನಮಠದ ಗುದ್ನೇಶ್ವರ ರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಶಾಸಕ ಹಾಲಪ್ಪ ಆಚಾರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ’ ಗುದ್ನೇಶ್ವರ ಜಾತ್ರೆ ನಮ್ಮ ಭಾಗದ ಅತಿ ದೊಡ್ಡದಾದ ಜಾತ್ರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ ಎಂದರು.
ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಪ್ರಭುಲಿಂಗ ದೇವರು, ಮಹದೇವ ದೇವರು, ತಹಶೀಲ್ದಾರ್ ರವಿರಾಜ ದಿಕ್ಷೀತ್, ಶರಣಪ್ಪ ರಾಜೂರು, ಶ್ರೀಶೈಲಗೌಡ ಸಂಕನಗೌಡ್ರ, ಪಿಎಸ್ಐ ಜಿ.ಎಸ್ ರಾಘವೇಂದ್ರ, ಸಿದ್ದಲಿಂಗಯ್ಯ ಬಂಡಿ, ಅಂದಪ್ಪ ಜವಳಿ, ಶೇಕರಪ್ಪ ವಾರದ, ಬಸವನಗೌಡ ತೊಂಡಿಹಾಳ, ರೇಹಮನ್ ಸಾಬ್ ಮಕ್ಕಪ್ಪನವರ, ಸುರೇಶ ಬಿಡನಾಳ, ಬಸವರಾಜ ಇಟಗಿ, ರಾಮಣ್ಣ ಬಂಕದಮನಿ, ಶರಣಯ್ಯ ಬಂಡಿ, ಮಹಲಿಂಗಪ್ಪ ಹುಚನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.