ಕುಷ್ಟಗಿ: ಕೊಪ್ಪಳದ ಗವಿಮಠ ಜಾತ್ರೆ ದಾಸೋಹಕ್ಕೆ ಇಲ್ಲಿಯ ಮಹಾವೀರ ಸಾಮಿಲ್ ಕಾರ್ಮಿಕರು ಮತ್ತು ಮಾಲೀಕರು ಮಿನಿಲಾರಿ ಮೂಲಕ ಕಟ್ಟಿಗೆಯನ್ನು ದೇಣಿಗೆ ರೂಪದಲ್ಲಿ ಕಳುಹಿಸಿದರು.
ಬುಧವಾರ ವಾಹನಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಟ್ಟ ಸಾಮಿಲ್ ಮಾಲಿಕ ಶಾಂತರಾಜ ಗೋಗಿ, ದಾಸೋಹಕ್ಕೆ ಸೇವೆ ಸಲ್ಲಿಸುವುದು ಕಾರ್ಮಿಕರು ಸೇರಿದಂತೆ ಎಲ್ಲರ ಸಂಕಲ್ಪ ಇತ್ತು ಎಂದರು.
ಪ್ರಮುಖರಾದ ಯಮನಪ್ಪ ಗುಮಗೇರಿ, ಶ್ರೇಣಿಕಾ ಗೊಗಿ, ಶರಣಪ್ಪ ಒಡೆಯರ, ಮಲ್ಲಪ್ಪ ಕುಂಬಾರ, ಷಣ್ಮುಖಪ್ಪ ಹಿರೇಅರಳಿಹಳ್ಳಿ, ಬಸವರಾಜ ಮನ್ನಾಪುರ, ಶರಣಪ್ಪ ಕಾಮನೂರು, ಮಲ್ಲಪ್ಪ ಕುಷ್ಟಗಿ, ದಾವಲಸಾಬ ತಾಳಕೇರಿ, ಸಂಗಮೇಶ ಕುಂಬಾರ, ಪರಸಪ್ಪ ಟಕ್ಕಳಕಿ, ಹನುಮಂತಪ್ಪ ಕಟ್ಟಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.