ಕುಕನೂರು: ಬಹುದಿನಗಳ ಕನಸಾದ ಗದಗ-ವಾಡಿ ರೈಲು ಸಂಚಾರಕ್ಕೆ ಗುರುವಾರ ಕುಷ್ಟಗಿಯಲ್ಲಿ ಚಾಲನೆ ದೊರೆಕಿದ್ದು, ಕುಕನೂರಿಗೆ ಬಂದ ನೂತನ ರೈಲನ್ನು ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು.
ರೈಲ್ವೆ ನಿಲ್ದಾಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ರೈಲು ಬರುವ ವೇಳೆಗೆ ಪಟಾಕಿ ಹಚ್ಚಿ ಸಂಭ್ರಮಿಸಿದರು.
ರಾಮಣ್ಣ ಭಜಂತ್ರಿ, ಪರುಶುರಾಮ ಸಕ್ರಣ್ಣವರ, ನೂರುದ್ದೀನ್ ಸಾಬ್ ಗುಡಿಹಿಂದಲ್, ಪ್ರಶಾಂತ ಆರುಬೆರಳಿನ, ಅಂದಪ್ಪ ಜವಳಿ, ಈಶಪ್ಪ ಸಬರದ, ಸಿದ್ಧಲಿಂಗಯ್ಯ ಹಿರೇಮಠ, ರಮೇಶ್ ಗಜಕೋಶ, ಮುತ್ತು ರಾಜೂರು, ಈರಣ್ಣ ಯಲಬುರ್ಗಾ, ಅಂದಪ್ಪ ಹುರುಳಿ, ಮುತ್ತು ವಾಲ್ಮೀಕಿ ,ದ್ಯಾಮಣ್ಣ ಜಮಖಂಡಿ, ಜಂಬಣ್ಣ ಅಂಗಡಿ, ನಿಂಗರಾಜ ಅಣ್ಣಿಗೇರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.