ADVERTISEMENT

ಹನುಮಸಾಗರ: ಶ್ರೇಣಿ ಮಟ್ಟದವಾರ್ಷಿಕ ಸ್ಪರ್ಧೆಯಲ್ಲಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 5:49 IST
Last Updated 17 ಫೆಬ್ರುವರಿ 2020, 5:49 IST
ಬಳ್ಳಾರಿಯಲ್ಲಿ ಪೊಲೀಸ್ ಕರ್ತವ್ಯ ಕುರಿತು ಪೊಲೀಸ್ ಸಿಬ್ಬಂದಿಗೆ ನಡೆದ ಶ್ರೇಣಿ ಮಟ್ಟದ ವಾರ್ಷಿಕ ಸ್ಪರ್ಧೆಯಲ್ಲಿ ಹನುಮಸಾಗರದ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ಅವರು ಬಹುಮಾನ ಸ್ವೀಕರಿಸಿದರು
ಬಳ್ಳಾರಿಯಲ್ಲಿ ಪೊಲೀಸ್ ಕರ್ತವ್ಯ ಕುರಿತು ಪೊಲೀಸ್ ಸಿಬ್ಬಂದಿಗೆ ನಡೆದ ಶ್ರೇಣಿ ಮಟ್ಟದ ವಾರ್ಷಿಕ ಸ್ಪರ್ಧೆಯಲ್ಲಿ ಹನುಮಸಾಗರದ ಪೊಲೀಸ್ ಸಬ್‍ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ಅವರು ಬಹುಮಾನ ಸ್ವೀಕರಿಸಿದರು   

ಹನುಮಸಾಗರ:ಇಲ್ಲಿನ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಅಮರೇಶ ಹುಬ್ಬಳ್ಳಿಯವರಿಗೆ ಬಳ್ಳಾರಿಯಲ್ಲಿ ಈಚೆಗೆ ನಡೆದ ಪೊಲೀಸ್ ಕರ್ತವ್ಯ ಕುರಿತು ಪೊಲೀಸ್ ಸಿಬ್ಬಂದಿಗೆ ನಡೆದ ಶ್ರೇಣಿ ಮಟ್ಟದ ವಾರ್ಷಿಕ ಸ್ಪರ್ಧೆಗಳಲ್ಲಿ ಎರಡು ಚಿನ್ನ, ಒಂದು ಬೆಳ್ಳಿ, ಎರಡು ಕಂಚಿನ ಪದಕಗಳನ್ನು ಪಡೆದುಕೊಂಡರು.

ತನಿಖೆ ಮತ್ತು ಕ್ರಿಮಿನಲ್ ಕಾನೂನು ಸ್ಪರ್ಧೆಗೆ ವೈಜ್ಞಾನಿಕ ಸಹಾಯಗಳು ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ (ಚಿನ್ನ), ಮೆಡಿಕೋ ಲೀಗಲ್ ಮೌಖಿಕ ಸ್ಪರ್ಧೆಯಲ್ಲಿ (ಬೆಳ್ಳಿ), ಸಾಕ್ಷ್ಯಾಧಾರಗಳ ಸ್ಪರ್ಧೆ, ಪ್ಯಾಕಿಂಗ್ ಮತ್ತು ನಿರ್ವಹಣೆ ಸ್ಪರ್ಧೆಯಲ್ಲಿ (ಕಂಚು) ಬಹುಮಾನಗಳನ್ನು ಪಡೆದುಕೊಂಡರು. ಬಳ್ಳಾರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT