ADVERTISEMENT

ಶಿವದಾಸ ಘೋಷ್ ಜನ್ಮಶತಾಬ್ದಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 4:46 IST
Last Updated 6 ಆಗಸ್ಟ್ 2022, 4:46 IST
ಕೊಪ್ಪಳದಲ್ಲಿ ಶುಕ್ರವಾರ ಶಿವದಾಸ ಘೋಷ್ ಜನ್ಮಶತಾಬ್ದಿ ಕಾರ್ಯಕ್ರಮ ನಡೆಯಿತು
ಕೊಪ್ಪಳದಲ್ಲಿ ಶುಕ್ರವಾರ ಶಿವದಾಸ ಘೋಷ್ ಜನ್ಮಶತಾಬ್ದಿ ಕಾರ್ಯಕ್ರಮ ನಡೆಯಿತು   

ಕೊಪ್ಪಳ: ಕಾರ್ಮಿಕ ವರ್ಗದ ನಾಯಕ ಎಸ್‌ಯುಸಿಐ ಕಮುನಿಸ್ಟ್ ಪಕ್ಷದ ಸ್ಥಾಪಕ ಶಿವದಾಸ ಘೋಷ್ಅವರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ ಮಾತನಾಡಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹಾಗೂ ಅನುಶೀಲನ ಸಮಿತಿ ಸದಸ್ಯರಾದ ಕಾಮ್ರೆಡ್ ಶಿವದಾಸ್ ನಿರಂತರವಾಗಿ ದುಡಿಯುವ ಜನಗಳ, ಶೋಷಿತ ಜನರ ವಿಮುಕ್ತಿಗಾಗಿ ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳನ್ನು ಭಾರತ ನೆಲದಲ್ಲಿ ಹರಡಲು ಶ್ರಮಿಸಿದರು’ ಎಂದರು.

ಪಕ್ಷದ ಮುಖಂಡರಾದ ರಮೇಶ ವಂಕಲಕುಂಟಿ, ಗಂಗರಾಜ್ ಅಳ್ಳಳ್ಳಿ , ಶರಣು ಪಾಟೀಲ್, ಸಿದ್ದಲಿಂಗ ರೆಡ್ಡಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.