ಅಳವಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಕರಡಿ ಫೌಂಡೇಶನ್ ವತಿಯಿಂದ ಮಾಸ್ಕ್ ವಿತರಿಸಲಾಯಿತು.
ಫೌಂಡೇಶನ್ ಪದಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿದರು.
ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು.
ಮುಖಂಡರಾದ ಪ್ರದೀಪ್ ಗೌಡ ಮಾಲಿ ಪಾಟೀಲ, ನಾಗಪ್ಪ ಸವಡಿ, ಭೀಮರೆಡ್ಡಿ ಗದ್ದಿಕೇರಿ, ಹನುಮಂತ ಉಂಕಿ, ಬಸನಗೌಡ ಕಲಾದಗಿ, ವಸಂತಪ್ಪ ನಾಗರಲ್ಲಿ, ಶ್ರೀನಿವಾಸ್ ಕಲಾದಗಿ, ಸುರೇಶ ದಾಸರೆಡ್ಡಿ, ಬಸವರಾಜ ಕರ್ಕಿಹಳ್ಳಿ, ನಾಗರಾಜ, ಗಿರೀಶ ಕಣವಿ, ಸತೀಶ ಜಾಣಗರ್, ಸಾಗರ ಉಪ್ಪಾರ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.