ADVERTISEMENT

ಮೂವರು ಬೈಕ್‌ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:25 IST
Last Updated 27 ಸೆಪ್ಟೆಂಬರ್ 2020, 3:25 IST
ಬೈಕ್‌ ಕಳ್ಳರನ್ನು ಬಂಧಿಸಿರುವ ಪಾಂಡವಪುರದ ಪೊಲೀಸರು
ಬೈಕ್‌ ಕಳ್ಳರನ್ನು ಬಂಧಿಸಿರುವ ಪಾಂಡವಪುರದ ಪೊಲೀಸರು   

ಪಾಂಡವಪುರ: ವಿವಿಧೆಡೆ ಬೈಕ್‌ಗಳನ್ನು ಕಳವು ಮಾಡಿದ್ದ ಮೂವರು ಕಳ್ಳರನ್ನು ಪಟ್ಟಣದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮಳವಳ್ಳಿ ಪಟ್ಟಣ ಕೀರ್ತಿನಗರದ ಮನ್ಸೂರ್‌, ಕೋಟೆ ಬೀದಿಯ ಗುರುಪ್ರಸಾದ್ ಹಾಗೂ ಮಂಡ್ಯ ತಾಲ್ಲೂಕು ಎಚ್.ಕೊಡಹಳ್ಳಿ ಫಾರಂನ ಮಂಜು ಬಂಧಿತರು. ಆರೋಪಿಗಳಿಂದ ₹2 ಲಕ್ಷ ಬೆಲೆ ಬಾಳುವ 7 ಬೈಕ್‌ಗಳನ್ನು ವಶಪಡಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಮೇಲುಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಈರೇಗೌಡನಕೊಪ್ಪಲು ಗ್ರಾಮದಲ್ಲಿ ಕಳೆದ ಮಾರ್ಚ್‌ ತಿಂಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಅನ್ನು ಕಳವು ಮಾಡಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 7 ಬೈಕ್‌ಗಳನ್ನು ಕದ್ದಿರುವುದಾಗಿ ಬಾಯಿಬಿಟ್ಟರು. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭಿ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದುಸಿಪಿಐ ಪ್ರಭಾಕರ್ ಮಾಹಿತಿ ನೀಡಿದರು.

ADVERTISEMENT

ಮೇಲುಕೋಟೆ ಠಾಣೆಯ ಎಸ್‌ಐ ಚಿದಾನಂದ್‌ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿಗಳಾದ ಜಯರಾಮ್‌, ಸಂದೀಪ್‌, ರಾಜೇಶ್, ಎಚ್‌.ಜಿ.ಷರೀಫ್‌, ಸತೀಶ್‌, ಕಾಳೇಗೌಡ, ಕೃಷ್ಣೇಗೌಡ ಆರೋಪಿಗಳ ಬಂಧನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.