ADVERTISEMENT

ಮೈಸೂರು: ತಂದೆ ಮತ್ತು ಅವರ ಸ್ನೇಹಿತೆಯನ್ನು ಕೊಲೆ ಮಾಡಿ ಪರಾರಿಯಾದ ಪುತ್ರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 8:14 IST
Last Updated 22 ಅಕ್ಟೋಬರ್ 2021, 8:14 IST
ತಪಾಸಣೆ ನಡೆಸುತ್ತಿರುವ ಪೊಲೀಸರು
ತಪಾಸಣೆ ನಡೆಸುತ್ತಿರುವ ಪೊಲೀಸರು   

ಮೈಸೂರು: ಇಲ್ಲಿನ ಶ್ರೀನಗರದ ನಿವಾಸಿ ಲತಾ (48) ಹಾಗೂ ಕೆ.ಜಿ.ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಎಂಬುವವರನ್ನು ಶಿವಪ್ರಕಾಶ್ ಅವರ ಪುತ್ರ ಸಾಗರ್ ಗುರುವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಲತಾ ಅವರ ಮನೆಯಲ್ಲಿದ್ದ ಶಿವಪ್ರಕಾಶ ಮೇಲೆ ಮೊದಲು ಪುತ್ರ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ. ತಡೆಯಲು ಬಂದ ಲತಾ ಅವರ ಮೇಲು ಮಚ್ಚಿ ಬೀಸಿದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಹಿಡಿಯಲು ಬಂದ ಲತಾ ಪುತ್ರ ನಾಗಾರ್ಜುನ ಅವರಿಗೂ ಗಾಯಗಳಾಗಿವೆ.

ಶಿವಪ್ರಕಾಶ್ ಹಾಗೂ ಲತಾ ಮಧ್ಯೆ ಇದ್ದ ಸ್ನೇಹವೇಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ . ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.