ADVERTISEMENT

ಕುರಿ ರಕ್ಷಿಸಲು ಹೋಗಿ ಜೀವತೆತ್ತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:36 IST
Last Updated 15 ಅಕ್ಟೋಬರ್ 2018, 19:36 IST
ಕುಂಟಮರಿಗೌಡ
ಕುಂಟಮರಿಗೌಡ   

ಕೆ.ಆರ್.ನಗರ: ಕುರಿ ರಕ್ಷಣೆ ಮಾಡಲು ಹೋದ ಕುರಿಗಾಯಿ, ಮಧುವನಹಳ್ಳಿ ಬಡಾವಣೆ ನಿವಾಸಿ ಕುಂಟಮರಿಗೌಡ (62) ಎಂಬುವರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಏಳು ಕುರಿಗಳು ಅಸುನೀಗಿವೆ.

ಇಲ್ಲಿನ ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಹಾಸನ– ಮೈಸೂರು ರಾಜ್ಯ ಹೆದ್ದಾರಿ ಸೇತುವೆ ಬಳಿ ಭಾನುವಾರ ಸಂಜೆ ಮರಿಗೌಡ ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಕುರಿಗಳು ಹಳಿಗಳ ಬಳಿಗೆ ಹೋಗಿದ್ದನ್ನು ಗಮನಿಸಿದ ಮರಿಗೌಡ, ಅವುಗಳನ್ನು ಓಡಿಸಲು ಸೇತುವೆ ಮೇಲಿನಿಂದ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಆಗ ಆಯತಪ್ಪಿ ಕೆಳಗೆ ಬಿದ್ದ ಮರಿಗೌಡ ಅವರ ಮೇಲೆ ರೈಲು ಹರಿದಿದೆ. ಹೀಗಾಗಿ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT