ADVERTISEMENT

ಮೈಸೂರು | ಚಾಮುಂಡೇಶ್ವರಿ ರಥ ಚಕ್ರದ ವಿವಾದ: ಒಂದೇ ದಿನದಲ್ಲಿ ವಿನ್ಯಾಸ ಬದಲು

ಇಂಥದ್ದನ್ನು ಸಹಿಸಬೇಕಾ?: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 14:21 IST
Last Updated 11 ಮಾರ್ಚ್ 2020, 14:21 IST
ರಥದ ಚಕ್ರದ ಮೇಲಿನ ಬದಲಾದ ವಿನ್ಯಾಸ
ರಥದ ಚಕ್ರದ ಮೇಲಿನ ಬದಲಾದ ವಿನ್ಯಾಸ   

ಮೈಸೂರು: ಚಾಮುಂಡಿಬೆಟ್ಟದಲ್ಲಿನ ಮಹಾಬಲೇಶ್ವರ ರಥದ ಚಕ್ರದ ಮೇಲಿನ ಚಿತ್ರಕಲಾ ವಿನ್ಯಾಸಕ್ಕೆ ಆಕ್ಷೇಪ ವ್ಯಕ್ತವಾದ 24 ಗಂಟೆಯಲ್ಲಿ, ಆ ವಿನ್ಯಾಸವನ್ನು ಬದಲಾಯಿಸಲಾಗಿದೆ.

ರಥಕ್ಕೆ ಹೊಸದಾಗಿ ಚಕ್ರ ನಿರ್ಮಿಸಿ ಪೇಂಟಿಂಗ್‌ ಮಾಡುವ ಗುತ್ತಿಗೆಯನ್ನು ನೀಡಲಾಗಿತ್ತು. ಗುತ್ತಿಗೆದಾರರು ಸೋಮವಾರ ಚಕ್ರದ ಮೇಲೆ ಚಂದ್ರ ಹಾಗೂ ನಕ್ಷತ್ರ ಆಕಾರದ ಚಿತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಮುಜರಾಯಿ ಇಲಾಖೆಯು ಮಂಗಳವಾರ ವಿನ್ಯಾಸ ಬದಲಾಯಿಸಿದೆ.

ಚಕ್ರದ ಮೊದಲ ವಿನ್ಯಾಸಕ್ಕೆ ಫೇಸ್‌ಬುಕ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಪ್ರತಾಪಸಿಂಹ, ‘ನೋಡಿ... ಇಂಥದ್ದನ್ನು ಸಹಿಸಬೇಕಾ? ನಿಮ್ಮ ಗಮನಕ್ಕೆ ಇರಲಿ ಎಂದು ಫೋಟೊ ಹಾಕಿದ್ದೇನೆ. ಪಾಠ ಕಲಿಸದೇ ಬಿಡುವುದಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.