ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಆಶ್ಲೇಷ ಮಳೆ ಅಬ್ಬರಿಸಿದೆ. ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರು ಗ್ರಾಮ ಹಾಗೂ ಪಿರಿಯಾಪಟ್ಟಣದ ಮುತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ 8 ಸೆಂ.ಮೀ.ನಷ್ಟು ಮಳೆ ಸುರಿದಿದೆ.
ಎಚ್.ಡಿ.ಕೋಟೆ ಪಟ್ಟಣದಲ್ಲಿ 6, ಪಿರಿಯಾಪಟ್ಟಣದಲ್ಲಿ 4, ನಂಜನಗೂಡಿನ ಹುಲ್ಲಹಳ್ಳಿಯಲ್ಲಿ 4, ಮೈಸೂರು ನಗರದಲ್ಲಿ 1 ಸೆಂ.ಮೀ.ನಷ್ಟು ಮಳೆಯಾಗಿದೆ.
ನಗರದಲ್ಲಿ ನಸುಕಿನಿಂದಲೇ ಮಳೆ ಆರಂಭವಾಗಿತ್ತು. ವಾಯುವಿಹಾರಿಗಳು ಮನೆಯಲ್ಲೇ ಉಳಿಯುವಂತಾಯಿತು. ಬೇಗನೆ ಎದ್ದು ಹೊರಟಿದ್ದವರು ಅರ್ಧ ದಾರಿಯಲ್ಲೇ ಮಳೆಯಲ್ಲಿ ಸಿಲುಕಬೇಕಾಯಿತು. ಜಿಟಿಜಿಟಿ ಮಳೆ ದಿನವಿಡೀ ಮುಂದುವರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.