ADVERTISEMENT

ತರಬೇತಿಯಲ್ಲೂ ತಾರತಮ್ಯ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:58 IST
Last Updated 19 ಡಿಸೆಂಬರ್ 2019, 19:58 IST

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶವನ್ನು ಉತ್ತಮಪಡಿಸಲು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಎರಡು ದಿನಗಳ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಖಾಸಗಿ ಕಾಲೇಜುಗಳನ್ನು ದೂರ ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾ ಮಟ್ಟದ ಉಪನ್ಯಾಸಕರ ತರಬೇತಿ ಕಾರ್ಯಕ್ರಮ ಇದೇ 23, 24ರಂದು ಹಾಗೂ 30, 31ರಂದು ನಡೆಯಲಿದ್ದು, ಅಲ್ಲಿ ತರಬೇತಿ ನೀಡಲಿರುವ ಉಪನ್ಯಾಸಕರಿಗೆ ತರಬೇತಿ ನೀಡುವ ಕಾರ್ಯಕ್ರಮ ಇದೇ 20 ಮತ್ತು 21ರಂದು ನಡೆಯಲಿದೆ. ಪಿಯು ಇಲಾಖೆಯ ಉಪನಿರ್ದೇಶಕರು ಈ ಸಂಬಂಧ ಇದೇ 17ರಂದು ಜ್ಞಾಪನ ಪತ್ರ ಹೊರಡಿಸಿದ್ದಾರೆ.

‘ಪರೀಕ್ಷೆಯನ್ನು ಸರ್ಕಾರಿ, ಅನುದಾನಿತ, ಖಾಸಗಿ ಎಂಬ ಭೇದ ಇಲ್ಲದೆ ನಡೆಸಲಾಗುತ್ತಿದೆ. ಆದರೆ ತರಬೇತಿ ತಾರತಮ್ಯವೇಕೆ’ ಎಂಬುದು ಹಲವು ಉಪನ್ಯಾಸಕರು ಪ್ರಶ್ನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.