ರಾಯಚೂರು: ತಾಲ್ಲೂಕಿನ ಕಲ್ಮಾಲದಲ್ಲಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ನಾಗೂರು ಗ್ರಾಮ ಮಾನಸಿಕ ಅಸ್ವಸ್ಥ ಲಿಂಗಣ್ಣ ನಾಗೂರು (34) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಜರುಗಿದೆ.
ಕಲ್ಮಾಲದ ರಾಮಲಿಂಗಶ್ವೇರ ದೇವಸ್ಥಾನಕ್ಕೆ ತಾಯಿಯೊಂದಿಗೆ ಬಂದಿದ್ದ ಲಿಂಗಣ್ಣ ಮಲವಿಸರ್ಜನೆಗೆಂದು ಹೋದಾಗ ಈ ಘಟನೆ ನಡೆದಿದೆ. ಬ್ಲೇಡ್ನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಲಿಂಗಣ್ಣ ಪತ್ತೆಯಾಗಿದ್ದಾರೆ. ಮೃತನ ತಾಯಿ ಸಾಬವ್ವ ಅವರು ನೀಡಿದ ದೂರು ಆಧರಿಸಿ ಸಂಶಯಾಸ್ಪದ ಸಾವು ಪ್ರಕರಣವನ್ನು ಗ್ರಾಮೀಣ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.