ADVERTISEMENT

ರಾಯಚೂರು | ಬಿರುಗಾಳಿ ಮಳೆಗೆ ಗೋಡೆ ಕುಸಿದು ಇಬ್ಬರು ಮೊಮ್ಮಕ್ಕಳೊಂದಿಗೆ ಅಜ್ಜಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 7:03 IST
Last Updated 7 ಜೂನ್ 2019, 7:03 IST
ರಾಯಚೂರು ತಾಲ್ಲೂಕಿನ ಕೊತ್ತದೊಡ್ಡಿಯಲ್ಲಿ ಸಂಬಂಧಿಗಳ ರೋದನ.
ರಾಯಚೂರು ತಾಲ್ಲೂಕಿನ ಕೊತ್ತದೊಡ್ಡಿಯಲ್ಲಿ ಸಂಬಂಧಿಗಳ ರೋದನ.   

ರಾಯಚೂರು:ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಮಳೆಯಿಂದ ಗುಡಿಸಲು ಗೋಡೆ ಕುಸಿದು ಇಬ್ಬರು ಮೊಮ್ಮಕ್ಕಳೊಂದಿಗೆ ಅಜ್ಜಿಯೊಬ್ಬರು ಮೃತಪಟ್ಟಿರುವ ಹೃದಯ ಕಲಕುವ ಘಟನೆ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗೋವಿಂದಮ್ಮ (55), ಶಿವಾನಿ (3) ಹಾಗೂ ಮಲ್ಲಿಕಾರ್ಜುನ (5 ತಿಂಗಳು) ಮೃತಪಟ್ಟಿದ್ದಾರೆ.

ಪತಿಯ ಮನೆಯಲ್ಲಿದ್ದ ಮಗಳನ್ನು ನೋಡುವುದಕ್ಕಾಗಿ ಗೋವಿಂದಮ್ಮ‌ ಅವರು ಬಂದಿದ್ದರು. ಇಡುಪನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಮೃತಪಟ್ಟ ಗೋವಿಂದಮ್ಮ
ರಾತ್ರಿ ಬಿರುಗಾಳಿ ಮಳೆಗೆ ಮನೆಯ ಗೋಡೆ ಕುಸಿದಿದೆ.

ಸಂದರಿಂದ ಸಾಂತ್ವನ; ಪರಿಹಾರ ಭರವಸೆ

ಕೊತ್ತದೊಡ್ಡಿ ಗ್ರಾಮಕ್ಕೆ ನೂತನ ಸಂಸದ ರಾಜಾ ಅಮರೇಶ್ವರ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ‌ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಸಂಸದ ರಾಜಾ ಅಮರೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.