ರಾಮನಗರ: ಐದು ಆನೆಗಳು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನಲ್ಲಿ ಗುರುವಾರ ಕಾಣಿಸಿಕೊಂಡಿವೆ. ಆನೆಗಳ ಹಿಂಡು ಕಂಡು ಜನ ಭಯ ಭೀತಗೊಂಡಗೊಂಡಿದ್ದಾರೆ.
ಚನ್ನಪಟ್ಟಣ ನಗರಕ್ಕೆ ಕೇವಲ ಐದು ಕಿ.ಮಿ. ಅಂತರದಲ್ಲಿರುವ ಹೊಂಗನೂರು ಕೆರೆಯಲ್ಲಿ ಆನೆ ಹಿಂಡು ಬೀಡುಬಿಟ್ಟಿದೆ.
ಆನೆಗಳನ್ನ ಕಾಡಿಗೆ ಕಳುಹಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಮನೆಯಿಂದ ಹೊರ ಬರದಂತೆ ಸಾರ್ವಜನಿಕರಿಗೆ ಅರಣ್ಯಾಧಿಕಾರಿಗಳು ತಾಕೀತು ಮಾಡಿದ್ದಾರೆ.
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.