ಮಾಗಡಿ: ತಿರುಮಲೆ ಎಚ್.ಸಿ.ಬಾಲಕೃಷ್ಣ ಉದ್ಯಾನದ ಕೊಳವೆಬಾವಿಯ ನೀರನ್ನು ಪಟ್ಟಣದ ಜನತೆಗೆ ಕುಡಿಯಲು ಬಳಸಲಾಗುತ್ತಿದೆ. ಒಣಗಿರುವ ಉದ್ಯಾನದ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಪುರಸಭೆ ಎಂಜಿನಿಯರ್ ಪ್ರಶಾಂತ್ ಶೆಟ್ಟಿ ತಿಳಿಸಿದರು.
‘ಪ್ರಜಾವಾಣಿ’ ನಗರ ಸಂಚಾರದಲ್ಲಿ ಉದ್ಯಾನದ ಬಗ್ಗೆ ಬೆಳಕು ಚೆಲ್ಲಿದೆ. ಅವರ ಆಶಯದಂತೆ ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ’ ಎಂದರು. ಬುಧವಾರ ಸಂಜೆ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ಪರಿಶೀಲಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರದಿಂದ ಮಾತ್ರ ಯೋಜನೆಗಳು ಯಶಸ್ವಿಯಾಗಲಿವೆ. ರಸ್ತೆ ಬದಿ ಹಾದುಹೋಗಿರುವ ಕೊಳವೆಬಾವಿಯ ಪೈಪ್ ಅನ್ನು ಯಾರೋ ಒಡೆದು ಹಾಕಿ ನೀರೆಲ್ಲ ಪೋಲಾಗುವಂತೆ ಮಾಡಿದ್ದಾರೆ. ಒಡೆದು ಹೋಗಿರುವ ಪೈಪ್ ಬದಲಿಸಿ, ಉದ್ಯಾನನಲ್ಲೆ ಸಮಪರ್ಕವಾಗಿ ನೀರು ಸರಬರಾಜು ಮಾಡಿ ಹಸಿರು ನಳನಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.