ADVERTISEMENT

ವಿಫಲ ಕೊಳವೆಬಾವಿ ಮುಚ್ಚಿಸಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:42 IST
Last Updated 17 ಜನವರಿ 2019, 13:42 IST
ಮಕ್ಕಳನ್ನು ಬಲಿಪಡೆಯಲು ತೆರೆದಿರುವ ಕೊಳವೆಬಾವಿ.
ಮಕ್ಕಳನ್ನು ಬಲಿಪಡೆಯಲು ತೆರೆದಿರುವ ಕೊಳವೆಬಾವಿ.   

ಮಾಗಡಿ: ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಕೊರೆಸಿದ್ದ ಕೊಳೆವೆಬಾವಿಗೆ ಮುಚ್ಚಳ ಹಾಕದೆ, ಅಪಾಯಕಾರಿಯಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತೆರೆದ ಕೊಳವೆಬಾವಿಗೆ ಮಕ್ಕಳು ಬಿದ್ದು ಅಪಾಯ ಎದುರಾಗುವ ಮುನ್ನ ಪುರಸಭೆ ಅಧಿಕಾರಿಗಳು ನೀರಿಲ್ಲದೆ ಇರುವ ತೆರೆದ ಕೊಳವೆಬಾವಿಗೆ ಮುಚ್ಚಳ ಹಾಕಿ ದುರಂತ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT