ಕನಕಪುರ: ಕೊಳಗೊಂಡನಹಳ್ಳಿಯಲ್ಲಿ ಓಂಶಕ್ತಿ ಮಹಾಮಂಡಲ ಪೂಜೆ ಹಾಗೂ ಕುಂಭಮೇಳ ಮೆರವಣಿಗೆ ಶುಕ್ರವಾರ ರಾತ್ರಿ ನಡೆಯಿತು.
ಓಂ ಶಕ್ತಿಗೆ ತೆರಳುವ ಮುನ್ನಾದಿನ ಗ್ರಾಮದಲ್ಲಿ ಮಹಾಮಂಡಲ ಪೂಜಾ ಕಾರ್ಯ ನಡೆಯಿತು. ಮಾಲೆ ಹಾಕಿಸಿಕೊಂಡಿದ್ದ ಎಲ್ಲ ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿ ಪೂಜೆ ಸಲ್ಲಿಸಿದರು.
ಗುರುಸ್ವಾಮಿ ಜಯರತ್ನ ಅವರು ಎಲ್ಲರಿಗೂ ಓಂಶಕ್ತಿ ಮಾಲೆ ಧಾರಣೆ ಮಾಡಿದರು. ನಂತರ ಅನ್ನದಾಸೋಹ ನಡೆಯಿತು. ಗ್ರಾಮದ ಮುಖಂಡರಾದ ಹಿರಿಯ ಜನಪದ ಕಲಾವಿದ ನಾಗರಾಜು.ಕೆ.ಎಂ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಚೆನ್ನಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.