ADVERTISEMENT

ಪ್ರತಿಭಟನೆಗೆ ಹಾಲಪ್ಪ ಬೆಂಬಲ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 9:43 IST
Last Updated 23 ಅಕ್ಟೋಬರ್ 2017, 9:43 IST

ಹೊಸನಗರ: ಒಮ್ಮೆ ಪರವಾನಗಿ ನೀಡಿದ ಮೇಲೆ ಮದ್ಯದ ಅಂಗಡಿ ಬಂದ್ ಮಾಡಿಸುವುದರ ವಿರುದ್ಧ ಪ್ರತಿಭಟನಾ ಹೋರಾಟದ ಜತೆಗೆ ಕಾನೂನಿನ ಹೋರಾಟ ನಡೆಸುವುದು ಅಗತ್ಯ ಆಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದ ದ್ಯಾವರ್ಸದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಪರವಾನಿಗೆ ರದ್ದು ಮಾಡುವಂತೆ ಆಗ್ರಹಿಸಿ 8 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

ನ್ಯಾಯಯುತ ಹಾಗೂ ಅಹಿಂಸಾ ಪ್ರತಿಭಟನೆಗೆ ತಮ್ಮ ಬೆಂಬಲ, ಸಹಕಾರ ಇದೆ. ಇದರ ಜತೆಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಬೇಕಾದ ಮಾಹಿತಿ ಹಾಗೂ ಆರ್ಥಿಕ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ADVERTISEMENT

ಬಿಜೆಪಿ ಪ್ರಮುಖರಾದ ಮಂಡಾನಿ ಮೋಹನ್, ಬಸವರಾಜ, ಕೆ.ನಯನ ಕುಮಾರ ಮನೋಹರ, ಎ.ವಿ.ಮಲ್ಲಿಕಾರ್ಜುನ, ಬಾಲಚಂದ್ರ, ಸತೀಶ ವೀನಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.