ADVERTISEMENT

ರಾಮಚಂದ್ರಾಪುರದಲ್ಲಿ ಸಂಭ್ರಮದ ರಥೋತ್ಸವ

ವಿವಿಧೆಡೆ ಶ್ರೀರಾಮನವಮಿ ಆಚರಣೆ, ಸೀತಾ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 12:55 IST
Last Updated 20 ಏಪ್ರಿಲ್ 2013, 12:55 IST

ಹೊಸನಗರ: ಸಮೀಪದ ರಾಮಚಂದ್ರಾಪುರದಲ್ಲಿ  ಶ್ರೀರಾಮ ನವಮಿ ಅಂಗವಾಗಿ ಶುಕ್ರವಾರ ಮನ್ಮಹಾರಥೋತ್ಸವ  ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ ರಾಘವೇಶ್ವರ ಸ್ವಾಮೀಜಿನ ನೇತೃತ್ವದಲ್ಲಿ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳ ಮಧ್ಯಾಹ್ನ 12.30 ಕ್ಕೆ ಸಂಪನ್ನಗೊಂಡು ಶ್ರಿರಾಮ ದೇವರ ರಥಾರೂಢ ಕಾರ್ಯಕ್ರಮ ನಡೆಯಿತು.

ಸೇರಿದ ಭಕ್ತಜನಸಾಗರ ರಥ ಎಳೆದರು. ರಾಜ್ಯದ ವಿವಿಧೆಡೆಗಳಿಂದ ಮಠದ ಭಕ್ತರು ಆಗಮಿಸಿದ್ದರು. ಸಂಜೆ ಸೀತಾ ಕಲ್ಯಾಣೋತ್ಸವ ಹಾಗೂ ರಾವಣ ದಹನ ಕಾರ್ಯಕ್ರಮಗಳು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.