ADVERTISEMENT

ಇಂದಿರಾ ಕೊಲೆ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 15:23 IST
Last Updated 5 ಆಗಸ್ಟ್ 2019, 15:23 IST

ಭದ್ರಾವತಿ: ಭದ್ರಾವತಿ ಸಂಚಿಹೊನ್ನಮ್ಮ ಕಾಲೇಜಿನ ಪಿಯು ವಿದ್ಯಾರ್ಥಿನಿ ಇಂದಿರಾ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡುವ ಶಿವಕುಮಾರ್ (21) ಬಂಧಿತ ಆರೋಪಿ.

ತಾಲ್ಲೂಕಿನ ಕಾಳಿಂಗನಹಳ್ಳಿಯ ಅವರ ಮನೆಯಲ್ಲಿ ಭಾನುವಾರ ಇಂದಿರಾ ಕೊಲೆಯಾಗಿದ್ದರು. ಅಡುಗೆ ಮನೆಯಲ್ಲಿ ಕತ್ತುಸೀಳಿ ಅವರನ್ನು ಕೊಲೆ ಮಾಡಲಾಗಿತ್ತು.

ADVERTISEMENT

ಚಿಕ್ಕಮ್ಮಂದಿರಾದ ಕಲಾವತಿ, ತಿಲೋತ್ತಮೆ ಹಾಗೂ ಮಾವ ಜಗದೀಶನೊಂದಿಗೆ ಇಂದಿರಾ ವಾಸವಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಅಂದು ಇಬ್ಬೊಬ್ಬ ಯುವಕನ ವಿಚಾರವಾಗಿ ಜಗಳ ನಡೆದು ಮಚ್ಚು ಬೀಸಿದ ಮರಿಣಾಮ ಇಂದಿರಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.