ADVERTISEMENT

ಕ್ಷುಲ್ಲಕ ಕಾರಣಕ್ಕೆ ಜಗಳ; ಡ್ಯಾನ್ಸ್‌ ಮಾಸ್ಟರ್‌ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:00 IST
Last Updated 28 ಜನವರಿ 2021, 13:00 IST

ಶಿವಮೊಗ್ಗ: ಇಲ್ಲಿನ ಸುಂದರ್‌ ಆಶ್ರಯ ರೆಸ್ಟೋರೆಂಟ್‌ನಲ್ಲಿ ಬುಧವಾರ ರಾತ್ರಿ ಪಾರ್ಟಿ ನಡೆಯುವಾಗ ಪಕ್ಕದ ಟೇಬಲ್‌ನಲ್ಲಿದ್ದ ಯುವಕನನ್ನು ಗೆಳೆಯ ಎಂದು ತಪ್ಪಾಗಿ ಭಾವಿಸಿ ‘ಏನ್‌ ಮಗಾ’ ಅಂದಿದ್ದು ಜಗಳಕ್ಕೆ ಕಾರಣವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯಕಂಡಿದೆ.

ಐದಾರು ಜನರಿದ್ದ ಗುಂಪು ಇಬ್ಬರ ಮೇಲೆ ಹಲ್ಲೆ ನಡೆಸಿದೆ. ಚಾಕುವಿನಿಂದ ಇರಿದಿದ್ದಾರೆ. ಕೆ.ಆರ್‌.ಪುರಂನ ಡ್ಯಾನ್ಸ್‌ ಮಾಸ್ಟರ್‌ ಜೀವನ್‌ (26) ಸ್ಥಳದಲ್ಲೇ ಮೃತಪಟ್ಟರೆ, ಖಾಸಗಿ ಬ್ಯಾಂಕ್‌ ಉದ್ಯೋಗಿ ಕೇಶವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೀವನ್ ತನ್ನ ಸಹೋದರ ಸ್ವರೂಪ್‌ ಹಾಗೂ ಇತರೆ ಸ್ನೇಹಿತರ ಜತೆ ಪಾರ್ಟಿಗೆ ಹೋಗಿದ್ದಾರೆ. ಸ್ವರೂಪ್‌ ಪಕ್ಕದ ಟೇಬಲ್‌ನಲ್ಲಿದ್ದ ಯುವಕನನ್ನು ಮಾತನಾಡಿಸಿದ್ದಾರೆ. ಸ್ನೇಹಿತ ಅಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ. ಆದರೂ, ಆ ಗುಂಪು ಜಗಳಕ್ಕೆ ಮುಂದಾಗಿದೆ. ಅಲ್ಲಿದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಹೊರಗೆ ಹೋದ ಗುಂಪು ಮಾರಕಾಸ್ತ್ರಗಳನ್ನು ತಂದು ಬಾರ್ ಹೊರಗೆ ದಾಳಿ ನಡೆಸಿದೆ.

ADVERTISEMENT

ಘಟನೆ ನಂತರ ನಗರದ ಎಲ್ಲೆಡೆ ಪೊಲೀಸ್ ಪಹರೆ ಹಾಕಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.