ADVERTISEMENT

ತೀರ್ಥಹಳ್ಳಿಯ ಇಬ್ಬರಿಗೆ ನೈಟಿಂಗೇಲ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:54 IST
Last Updated 5 ಜುಲೈ 2022, 4:54 IST
ತೀರ್ಥಹಳ್ಳಿಯ ಶುಶ್ರೂಷಣಾಧಿಕಾರಿ ತನುಜಾ ಜಿ. ನಾಯ್ಕ್‌ (ಎಡಬದಿ) ಹಾಗೂ ಇಂದಿರಾ (ಬಲಬದಿ) ಅವರಿಗೆ ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು
ತೀರ್ಥಹಳ್ಳಿಯ ಶುಶ್ರೂಷಣಾಧಿಕಾರಿ ತನುಜಾ ಜಿ. ನಾಯ್ಕ್‌ (ಎಡಬದಿ) ಹಾಗೂ ಇಂದಿರಾ (ಬಲಬದಿ) ಅವರಿಗೆ ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು   

ತೀರ್ಥಹಳ್ಳಿ: ದಿ ನ್ಯಾಷನಲ್‌ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ನೀಡುವ ‘ರಾಷ್ಟ್ರೀಯ ಫ್ಲಾರೆನ್ಸ್‌ ನೈಟಿಂಗೇಲ್–2022’ ಪ್ರಶಸ್ತಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಜೆಸಿ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ತನುಜಾ ಜಿ. ನಾಯ್ಕ್‌ ಹಾಗೂ ಧಾರವಾಡ ಜಿಲ್ಲೆಯ ನವಲಗುಂದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ಇಂದಿರಾ ಅವರಿಗೆ ಲಭಿಸಿದೆ.

ಇಬ್ಬರೂ ತಾಲ್ಲೂಕಿನವರಾಗಿದ್ದು, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಂದಿರಾ ಅವರು ತಾಲ್ಲೂಕು ಜೆಸಿ ಆಸ್ಪತ್ರೆಯಲ್ಲೂ ಕೆಲವು ವರ್ಷ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT