ADVERTISEMENT

ಕೃಷ್ಣಕುಮಾರ್‌ ಸೋಲಿಗೆ ನಾನೇ ಕಾರಣ

ಶಾಸಕ ಆರ್‌.ಅಶೋಕ್ ಆತ್ಮವಿಮರ್ಶೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 10:09 IST
Last Updated 24 ಮಾರ್ಚ್ 2014, 10:09 IST

ಕುಣಿಗಲ್‌: ಕಳೆದ ವಿಧಾನಸಭಾ ಚುನಾ­ವಣೆ­ಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್‌ ಸೋಲಿಗೆ ನಾನೇ ಕಾರಣ ಎಂದು ಬಿಜೆಪಿ ಮುಖಂಡ, ಶಾಸಕ ಆರ್‌.ಅಶೋಕ್‌ ತಿಳಿಸಿದರು.

ತಾಲ್ಲೂಕಿನ ಗವಿಮಠದಲ್ಲಿ ಭಾನು­ವಾರ ಬಿಜೆಪಿ ಕಾರ್ಯಕರ್ತರ ಸಭೆ­ಯಲ್ಲಿ ಮಾತನಾಡಿದ ಕೃಷ್ಣಕುಮಾರ್‌, ‘ನನ್ನ ಸೋಲಿಗೆ ಅಶೋಕ್‌ ಕಾರಣ’ ಎಂದು ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ, ‘ನನ್ನಿಂದ ತಪ್ಪಾಗಿದೆ’ ಎಂದರು.

ಕೃಷ್ಣಕುಮಾರ್‌ ತೀವ್ರ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಾಗಿದ್ದರೆ ನಾನು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಗೆಲುವಿಗೆ ಸಹಕಾರಿ­ಯಾ­ಗು­ತ್ತಿದೆ ಎಂದ ಅಶೋಕ್, ಈಗ ನನ್ನ ಶಿಷ್ಯ­ನನ್ನು ಗೆಲ್ಲಿಸಿ. ನಿಮ್ಮನ್ನು ಶಾಸಕರನ್ನಾಗಿ ನಾವು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಚಿತ್ರ ನಟಿ ರಕ್ಷಿತಾ ಮಾತನಾಡಿ ಯುಪಿಎ ಸರ್ಕಾರದಲ್ಲಿ ಮಹಿಳೆ­ಯರಿಗೆ ಮೀಸಲಾತಿ, ರಕ್ಷಣೆ ದೊರೆಯಲಿಲ್ಲ ಎಂದರು.
ಅಭ್ಯರ್ಥಿ ಮುನಿರಾಜು ಮಾತ­ನಾಡಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಸಚಿವ, ಸಂಸದರ ದರ್ಪಕ್ಕೆ ಇತಿಶ್ರೀ ಹಾಕುವ ವಿಷಯದೊಂದಿಗೆ ಮತ ಕೇಳುತ್ತಿದ್ದೇನೆ ಎಂದರು.

ಮಾಜಿ ಸಚಿವ ರಾಮ­ಚಂದ್ರೇ­ಗೌಡ, ಮುಖಂಡರಾದ ಡಿ.ಕೃಷ್ಣ ಕುಮಾರ್, ಚಿಕ್ಕರಾಮಣ್ಣ, ನಾರಾ­ಯಣ ಗೌಡ, ಕೃಷ್ಣರೆಡ್ಡಿ, ಇಸ್ಮಾ­ಯಿಲ್, ಕೆ.ಎಂ.­ತಿಮ್ಮಪ್ಪ, ಅರುಣ್‌­ಕುಮಾರ್, ಶಶಿಕಲಾ, ಪದ್ಮಾ, ರಂಗಸ್ವಾಮಿ, ಎಸ್‌ಟಿಡಿ ಶ್ರೀನಿವಾಸ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.